Join Our

WhatsApp Group
Focus News
Trending

ಡಿಜೆವಿಎಸ್ ಪ್ರೌಢಶಾಲೆ ದೀವಗಿಗೆ ಮೂವರು ದಾನಿಗಳಿಂದ ವಿಶೇಷ ಕೊಡುಗೆ

ಕುಮಟಾ: ಶ್ರೀ ಗಣೇಶ ರಾಮಕೃಷ್ಣ ದೇಶಭಂಡಾರಿ ಮಲ್ಲಾಪುರ ರವರು ಸುಮಾರು 25000/-ರೂ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಹಾಗೂ ಸಿ.ಸಿ ಕ್ಯಾಮೆರಾ ನೀಡಿದ್ದಾರೆ. ದೀವಗಿಯ ಮೂಲ ನಿವಾಸಿಗಳಾದ ಶ್ರೀಮತಿ ಗೋದಾವರಿ ರಾಮಕೃಷ್ಣ ದೇಶ ಭಂಡಾರಿ ರವರ ಸುಪುತ್ರರಾದ ಇವರು ದೀವಗಿ ಪ್ರೌಢಶಾಲೆಯ ಮೇಲಿನ ವಿಶೇಷ ಅಭಿಮಾನದಿಂದ ಕೊಡುಗೆ ನೀಡಿದ್ದು, ಪ್ರೌಢಶಾಲೆಯ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು…

ಶ್ರೀ ಸಂತೋಷ ಪರಮೇಶ್ವರ ಅಂಬಿಗ ದೀವಗಿ ಇವರು ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ 5 ವಿದ್ಯಾರ್ಥಿಗಳನ್ನು ದತ್ತು ಪಡೆದಿದ್ದು ಪ್ರಸಕ್ತ ಸಾಲಿನಲ್ಲಿ ಸುಮಾರು 16000 ಮೌಲ್ಯದ ವ್ಯಾಸಂಗಕ್ಕೆ ಬೇಕಾದ ಕಲಿಕಾ ಪರಿಕರಗಳನ್ನು ನೀಡುವ ಮೂಲಕ ಮಕ್ಕಳ ವ್ಯಾಸಂಗಕ್ಕೆ ನೆರವಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಈ 5 ವಿದ್ಯಾರ್ಥಿಗಳಿಗೆ ತಗಲುಬಹುದಾದ ವೆಚ್ಚಗಳನ್ನು ತಾನು ಭರಿಸುವುದಾಗಿ ವಾಗ್ದಾನ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶ್ರೀಮತಿ ಸವಿತಾ ದೇಶಭಂಡಾರಿ ಇವರು ಡಿಜೆವಿಎಸ್ ಪ್ರೌಢಶಾಲೆಗೆ ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ನೀಡಿದ್ದು ಪಾಲಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂವರು ದಾನಿಗಳ ಕೊಡುಗೆಯನ್ನು ಮುಖ್ಯಾಧ್ಯಾಪಕ ಶ್ರೀ ಭಾಸ್ಕರ್ ಜಿ ಭಟ್ ಹಾಗೂ ಶಿಕ್ಷಕ ವೃಂದದವರು ಅಲ್ಲದೇ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button