ಗೊಬ್ಬರ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಬಾಲಕಿ ಸಾವು
ತಂದೆಯೊಂದಿಗೆ ಕೊಟ್ಟಿಗೆಗೆ ಹೋಗಿದ್ದ ಎರಡು ವರ್ಷದ ಪುಟಾಣಿ ಬಾಲಕಿ

ಅಂಕೋಲಾ: ತಂದೆಯೊಂದಿಗೆ ದನದ ಕೊಟ್ಟಿಗೆಗೆ ಎರಡು ವರ್ಷದ ಪುಟಾಣಿ ಬಾಲಕಿ ಒರ್ವಳು ಆಕಸ್ಮಿಕವಾಗಿ ಗೊಬ್ಬರದ ಗುಂಡಿಗೆ ಬಿದ್ದು ಮೃತ ಪಟ್ಟ ಮನಕಲಕುವ ಘಟನೆ ತಾಲೂಕಿನ ಡೋಂಗ್ರಿ ಗ್ರಾ. ಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ. ಸಾದ್ವಿ ಶ್ರೀಕಾಂತ ಹೆಬ್ಬಾರ್ ಮೃತ ದುರ್ದೈವಿ ಕಂದಮ್ಮಳಾಗಿದಾಳೆ. ತಂದೆ ಶ್ರೀಕಾಂತ ಹೆಬ್ಬಾರ್ ದನದ ಕೊಟ್ಟಿಗೆ ಸ್ವಚ್ಛ ಮಾಡುತ್ತಿರುವ ಸಂದರ್ಭದಲ್ಲಿ ಅವರ ಅರಿವಿಗೆ ಬಾರದೇ, ಪುಟಾಣಿ ಕಂದಮ್ಮ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಪಕ್ಕದಲ್ಲಿ ಇರುವ ಗೊಬ್ಬರ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದಳು ಎನ್ನಲಾಗುತ್ತಿದೆ.
ಮಳೆ ನೀರು ಮತ್ತಿತರ ಕಾರಣದಿಂದ ತುಂಬಿ ಕೊಂಡಿದ್ದ ಗೊಬ್ಬರ ಗುಂಡಿಯಲ್ಲಿ ಬಾಲಕಿ ಬಿದ್ದು ಕೆಲವು ಸಮಯದ ನಂತರ ತಂದೆಯ ಗಮನಕ್ಕೆ ಬಂದಿದ್ದು ಮಗುವನ್ನು ತಕ್ಷಣ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲು ಕರೆತರಲಾಯಿತಾದರೂ, ಅವಳನ್ನು ಪರೀಕ್ಷಿಸಿದ ವೈದ್ಯರು ಪರೀಕ್ಷಿಸಿದ ವೈದ್ಯರು ಮಗು ಮೃತ ಪಟ್ಟಿರುವುದಾಗಿ ದೃಡಪಡಿಸಿದರು ಎನ್ನಲಾಗಿದೆ. ಪುಟ್ಟ ಮಗುವಿನ ಈ ಸಾವು ಕುಟುಂಬಕ್ಕೆ ಮತ್ತು ಹಳವಳ್ಳಿ ಸುತ್ತ ಮುತ್ತಲಿನ ಜನರು ಶೋಖ ಸಾಗರದಲ್ಲಿ ಮುಳುಗುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ