Join Our

WhatsApp Group
Important
Trending

ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ: ಏನಾಯ್ತು ನೋಡಿ?

  • ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ
  • ಶೀಘ್ರದಲ್ಲೇ ವೈದ್ಯರ ನೇಮಕದ ಭರವಸೆ
  • ರಸ್ತೆಯ ಡಾಂಬರೀಕರಣ ಮಾಡಿಕೊಡುವುದಾಗಿ ಹೇಳಿದ ಅಧಿಕಾರಿಗಳು
  • ಮಾತು ತಪ್ಪಿದ್ರೆ ಉಗ್ರ ಹೋರಾಟದ ಎಚ್ಚರಿಕೆ

ಕುಮಟಾ: ಶಿರಸಿ ರಸ್ತೆ ಕಾಮಗಾರಿ ಆರಂಭವಾಗಿ 7 ವರ್ಷಗಳು ಕಳೆದರೂ ಸಹ ಕಾಮಗಾರಿ ಪೂರ್ತಿಯಾಗಿ ಮುಗಿದಿಲ್ಲ. ಇದರಿಂದಾಗಿ ತಾಲೂಕಿನ ಮಾಸ್ತಿಹಳ್ಳದಿಂದ ದೀವಗಿಯ ವರೆಗೆ ರಸ್ತೆಯು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು ಜನರ ಓಡಾಟಕ್ಕೆ ತೊಂದರೆಯಾಗಿದೆ. ಈ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ಸಂಬoಧಿಸಿದoತೆ ಅತ್ಯಂತ ಶಿಘ್ರವಾಗಿ ತಾತ್ಕಾಲಿಕ ಡಾಂಬರೀಕರಣ ಮಾಡಬೇಕು. ಮತ್ತು ಕತಗಾಲ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಖಾಯಂ ವೈದ್ಯರು ಇರುವಂತೆ ಆದೇಶ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಕತಗಾಲ, ಮಾಸ್ತಿಹಳ್ಳ ಭಾಗದ ಸಾರ್ವಜನಿಕರು ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳು ಬರುವವರೆಗೂ ಬಿಡದ ಪ್ರತಿಭಟನಾಕಾರರು

ಈ ಸಂದರ್ಭದಲ್ಲಿ ಕುಮಟಾ ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬ್ಳೆ ಅವರು ಪ್ರತಿಭಟನಾಕಾರರ ಮನ ಒಲಿಸಲು ಪ್ರಯತ್ನಿಸಿದರೂ ಸ್ಥಳಕ್ಕೆ ಸಂಬoಧಪಟ್ಟ ಅಧಿಕಾರಿಗಳು ಆಗಮಿಸುವ ವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ನಂತರ ಸ್ಥಳಕ್ಕೆ ತಾಲೂಕಾ ಆರೋಗ್ಯಾಧಿಕಾರಿಗಳಾದ ಆಜ್ಞಾ ನಾಯಕ ಅವರು ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಆಲಿಸಿದರು.

ಕತಗಾಲ ಮತ್ತು ಯಾಣ ಗುಡ್ಡಗಾಡುಗಳಿಂದ ತುಂಬಿದ ಪ್ರದೇಶವಾಗಿದ್ದು ಯಾರಿಗಾದರೂ ಅನಾರೋಗ್ಯ ಆದ್ದಲ್ಲಿ 25 ಕಿ.ಮಿ.ದೂರದಿಂದ ಕುಮಟಾ ತಾಲೂಕ ಆಸ್ಪತ್ರೆಗೆ ಬರಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಅತ್ಯಂತ ತ್ವರಿತವಾಗಿ ಪ್ರಾಥಮಿಕ ಆರೋಗ್ಯ ಕೆಂದ್ರ ಕತಗಾಲದಲ್ಲಿ ಖಾಯಂ ವೈದ್ಯರು ಇರುವಂತೆ ನೊಡಿಕೋಳ್ಳಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದರು. ತಾಲೂಕಾ ಆರೋಗ್ಯಾಧಿಕಾರಿಗಳು ಆದಷ್ಟು ಶೀಘ್ರದಲ್ಲಿ ವೈದ್ಯರ ನೇಮಕ ಮಾಡುವ ಕುರಿತಂತೆ ಮೇಲಾಧಿಕಾರಿಗಳ ಬಳಿ ಚರ್ಚಿಸುವುದಾಗಿ ತಿಳಿಸಿದರು.

NHI ಅಧಿಕಾರಿಗಳ ವಿರುದ್ಧ ಘೋಷಣೆ

ನಂತರ ಸ್ಥಳಕ್ಕೆ ಎನ್‌ಎಚ್.ಐ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆಯನ್ನು ಕೂಗಿ, ಆಕ್ರೋಶ ಹೊರಹಾಕಿದರು. ಶಿರಸಿ ಕುಮಟಾ ರಸ್ತೆ ಅತ್ಯಂತ ಶೋಚನೀಯ ಸ್ಥಿತಿ ತಲುಪಿದೆ ಸಾರ್ವಜನಿಕರಿಗೆ ಓಡಾಡುವ ಸ್ಥಿತಿಯಲ್ಲಿ ಇಲ್ಲ. ಆರ್.ಎನ್.ಎಸ್.ಕಂಪನಿ ಕಾಮಗಾರಿ ಗುತ್ತಿಗೆ ಪಡೆದು 6 ರಿಂದ 7 ವರ್ಷಗಳು ಸಮಿಪಿಸುತ್ತಿದೆ ಇನ್ನು ಸಹ ಅರ್ದಂಭರ್ದ ಕಾಮಗಾರಿ ಮಾಡಿ ರಸ್ತೆ ಸಂಪೂರ್ಣ ಹೊಂಡಮಯ ಆಗುವಂತೆ ಮಾಡಿದ್ದಾರೆ.

ಸಾರ್ವಕನಿಕರ ಅನೂಕೂಲಕ್ಕಾಗಿ ಅತ್ಯಂತ ಶಿಘ್ರವಾಗಿ ತಾತ್ಕಾಲಿಕ ಡಾಂಬರಿಕರಣ ಮಾಡಿಕೊಡುವಂತೆ ಆಗ್ರಹಿಸಿ ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎನ.ಎಚ್.ಐ ಅಧಿಕಾರಿಗಳು ಆದಷ್ಟು ಶಿಘ್ರದಲ್ಲಿ ರಸ್ತೆಯ ಡಾಂಬರೀಕರಣ ಮಾಡಿಕೊಡುವುದಾಗಿ ಭರವಸೆ ನೀಡಿದರು. ನಾಳೆಯಿಂದಲೇ ಕೆಲಸವನ್ನು ಆರಂಭಿಸುವುದಾಗಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ರಾಜು ಮಾಸ್ತಿಹಳ್ಳ ಮಾತನಾಡಿ ಶಿರಸಿ ಕುಮಟಾ ರಸ್ತೆ ಅತ್ಯಂತ ಶೋಚನೀಯ ಸ್ಥಿತಿ ತಲುಪಿದೆ ಸಾರ್ವಜನಿಕರಿಗೆ ಓಡಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಆರ್.ಎನ್.ಎಸ್.ಕಂಪನಿ ಕಾಮಗಾರಿ ಗುತ್ತಿಗೆ ಪಡೆದು 6 ರಿಂದ 7 ವರ್ಷಗಳು ಸಮಿಪಿಸುತ್ತಿದೆ ಇನ್ನು ಸಹ ಅರ್ದಂಭರ್ದ ಕಾಮಗಾರಿ ಮಾಡಿ ರಸ್ತೆ ಸಂಪೂರ್ಣ ಹೊಂಡಮಯ ಆಗುವಂತೆ ಮಾಡಿದ್ದಾರೆ.ಅಲ್ಲದೇ ಕತಗಾಲ ಮತ್ತು ಯಾಣ ಗುಡ್ಡಗಾಡುಗಳಿಂದ ತುಂಬಿದ ಪ್ರದೇಶವಾಗಿದ್ದು ಯಾರಿಗಾದರೂ ಅನಾರೋಗ್ಯ ಆದ್ದಲ್ಲಿ ದೂರದ 25 ಕಿ.ಮಿ.ದೂರ ಕುಮಟಾ ತಾಲೂಕ ಆಸ್ಪತ್ರೆಗೆ ಬರಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಅತ್ಯಂತ ತ್ವರಿತವಾಗಿ ಪ್ರಾಥಮಿಕ ಆರೋಗ್ಯ ಕೆಂದ್ರ ಕತಗಾಲದಲ್ಲಿ ಖಾಯಂ ವೈದ್ಯರು ಇರುವಂತೆ ನೊಡಿಕೊಳ್ಳಬೇಕು ಎಂದು ಆಗ್ರಹಿಸಿ ಮನವಿಯನ್ನು ನೀಡಿದ್ದೇವೆ. ಅದಷ್ಟು ಶೀಘ್ರದಲ್ಲಿ ರಸ್ತೆಯ ಡಾಂಬರೀಕರಣ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಕೀಲರಾದ ನಾಗರಾಜ ಹೆಗಡೆ, ಪ್ರಮುಖರಾದ ದೀಪಕ ನಾಯ್ಕ, ಮಾರುತಿ ಆನೇಗುಂದಿ, ಮಹೇಂದ್ರ ನಾಯ್ಕ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಸದಸ್ಯರು, ಕತಗಾಲ ಭಾಗದ ಸಾರ್ವಜನಿಕರು ಹಾಜರಿದ್ದರು.

ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ

Back to top button