![](http://i0.wp.com/vismaya24x7.com/wp-content/uploads/2020/07/uttara-kannada-10.png?fit=630%2C342&ssl=1)
ಹೊನ್ನಾವರ: ತಾಲೂಕಿನಲ್ಲಿ ಇಂದು 22 ಜನರಲ್ಲಿ ಕರೋನಾ ಪಾಸಿಟಿವ್ ಪತ್ತೆಯಾಗಿದೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ವರದಿಯಾದ ಪ್ರಕರಣಗಳಲ್ಲಿ ಹೆಚ್ಚು ಗ್ರಾಮೀಣ ಭಾಗದಲ್ಲಿಯೇ ಕಾಣಿಸಿಕೊಂಡಿದೆ. ಪಟ್ಟಣದಲ್ಲಿ-5 ಗ್ರಾಮೀಣ ಭಾಗದಲ್ಲಿ 16 ಪ್ರಕರಣ ದೃಢಪಟ್ಟಿದೆ.
ಹೊನ್ನಾಪಟ್ಟಣದ ಖಾಸಗಿ ಆಸ್ಪತ್ರೆಯ 36 ವರ್ಷದ ಪುರುಷ, ಕೆಳಗಿನಪಾಳ್ಯದ 34 ವರ್ಷದ ಮಹಿಳೆ, ಮಾಸ್ತಿಕಟ್ಟೆಯ 17 ವರ್ಷದ ಯುವಕ, 50 ವರ್ಷದ ಮಹಿಳೆ, ಪ್ರಭಾತ ನಗರದ 37 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಹೊನ್ನಾವರ ತಾಲೂಕಿನ ಗ್ರಾಮೀಣಭಾಗವಾದ ದರ್ಬೆಜಡ್ಡಿಯ 29 ವರ್ಷದ ಯುವತಿ, 9 ವರ್ಷದ ಬಾಲಕ, 5 ವರ್ಷದ ಬಾಲಕ, ದಿಬ್ಬಣಗಲ್ ನ 27 ವರ್ಷದ ಮಹಿಳೆ, ವರನಕೇರಿಯ 38 ವರ್ಷದ ಮಹಿಳೆ, 72 ವರ್ಷದ ಪುರುಷ, ಸಂಗನಹಿತ್ಲದ 38 ವರ್ಷದ ಮಹಿಳೆ, ಕಿರಬೈಲದ 33 ವರ್ಷದ ಪುರುಷ, ಟೋಂಕಾದ 32 ವರ್ಷದ ಯುವಕ, ನಾಥಗೇರಿಯ 39 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.
ಕರ್ಕಿಯ 45 ವರ್ಷದ ಪುರುಷ, ಕಡತೋಕಾದ 47 ವರ್ಷದ ಪುರುಷ, ನವಿಲಗೋಣದ 58 ವರ್ಷದ ಮಹಿಳೆ, ಕವಲಕ್ಕಿಯ 52 ವರ್ಷದ ಮಹಿಳೆ, 56 ವರ್ಷದ ಪುರುಷ, ಹಡಿನಬಾಳದ 29 ಪುರುಷ ಸೇರಿದಂತೆ ಇಂದು 22 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆರು ಜನರು ಡಿಸ್ಚಾರ್ಜ್ ಆಗುತ್ತಿದ್ದು, ಆಸ್ಪತ್ರೆಯಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿರಸಿಯಲ್ಲಿಂದು 12 ಮಂದಿಗೆ ಸೋಂಕು: 51 ಗುಣಮುಖ
ಶಿರಸಿ: ತಾಲೂಕಿನಲ್ಲಿ ಇಂದು 12 ಮಂದಿಗೆ ಕರೊನಾ ದೃಢಪಟ್ಟಿದೆ. ಇದೇ ವೆ ಇಂದು 51 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಗಾಂಧಿನಗರದಲ್ಲಿ 1, ಚಿಪಗಿ 1, ಮರಾಠಿಕೊಪ್ಪಾ 1, ಮಾರಿಕಾಂಬಾ ನಗರ 1, ಬಾಳೆಹಳ್ಳಿ 1, ನೀಲೆಕಣಿ 1, ಕೆ.ಎಚ್.ಬಿ ಕಾಲೋನಿ 1, ಹುಳಗೋಳ 1, ಮಾರಿಗುಡಿ ರೋಡ್ 2, ಮಂಜವಳ್ಳಿ 1, ಸಿದ್ದಾಪುರ ಮಣ್ಮನೆಯಲ್ಲಿ 1 ಕೇಸ್ ಕಾಣಿಸಿಕೊಂಡಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.