Important
Trending

ಮಾಸ್ಕ ಧರಿಸದಿದ್ರೆ ಕರೊನಾ ಟೆಸ್ಟ್: ಜಿಲ್ಲಾಧಿಕಾರಿಗಳ ಎಚ್ಚರಿಕೆ

ಹೊನ್ನಾವರದಲ್ಲಿ ಇಂದು 10 ಕರೊನಾ ಕೇಸ್ ದೃಢ
ಶಿರಸಿಯಲ್ಲಿ 14 ಮಂದಿಗೆ ಪಾಸಿಟಿವ್

[sliders_pack id=”1487″]

ಹೊನ್ನಾವರ: ತಾಲ್ಲೂಕಿನಲ್ಲಿ ಇಂದು 10 ಜನರಲ್ಲಿ ಕರೊನಾ ದೃಢಪಟ್ಟಿದೆ. ಚಂದಾವರದ ಒಂದೇ ಕುಟುಂಬದ 6 ಜನರಲ್ಲಿ ಸೋಂಕು ಕಾಣಿಸಿಕೊಂಡರೆ, ಕಡತೋಕಾದಲ್ಲಿ 2, ಅಗ್ರಹಾರಲ್ಲಿ 1, ಹೊನ್ನಾವರ ಪಟ್ಟಣದ ಕೆಳಗಿನಪಾಳ್ಯದಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಹೊನ್ನಾವರ ಪಟ್ಟಣದ ಕೆಳಗಿನಪಾಳ್ಯದ 17 ವರ್ಷದ ಯುವತಿ, ಗ್ರಾಮೀಣ ಭಾಗವಾದ ಹೊಳೆಗದ್ದೆಯ 12 ವರ್ಷದ ಬಾಲಕ, ಕಡತೋಕಾದ 83 ವರ್ಷದ ಪುರುಷ, 13 ವರ್ಷದ ಬಾಲಕಿ, ಚಂದಾವರದ 58 ವರ್ಷದ ಪುರುಷ, 64 ವರ್ಷದ ಪುರುಷ, 58 ವರ್ಷದ ಪುರುಷ, 48 ವರ್ಷದ ಮಹಿಳೆ, 39 ವರ್ಷದ ಮಹಿಳೆ, 5 ವರ್ಷದ ಬಾಲಕಿಗೆ ಪಾಸಿಟಿವ್ ಬಂದಿದೆ. ತಾಲೂಕಾ ಆಸ್ಪತ್ರೆಯಲ್ಲಿ 13 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಮನೆಯಲ್ಲಿ 121 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಾಸ್ಕ ಧರಿಸದಿದ್ರೆ ಕರೊನಾ ಟೆಸ್ಟ್

ಕುಮಟಾ: ಉದ್ದೇಶಪೂರಕವಾಗಿ ಯಾರೂ ಮಾಸ್ಕ್ ಧರಿಸದೇ ಒಡಾಡುತ್ತಾರೋ ಅಂತಹವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶಕುಮಾರ್ ಕೆ. ಅವರು ಎಚ್ಚರಿಸಿದ್ದಾರೆ. ಕುಮಟಾ ಸಹಾಯಕ ಆಯುಕ್ತ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಿ ಕೋವಿಡ್ ಟೆಸ್ಟ್ ಅನ್ನು ಮಾಡಬೇಕೆಂದು ಆರೋಗ್ಯ ಇಲಾಖೆ ನಿರ್ಧರಿಸುತ್ತದೆಯೋ ಅದನ್ನು ನಿರಾಖರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಸ್ಕ್ ಹಾಕುವುದನ್ನು ಯಾರು ನಿರಾಕರಿಸುತ್ತಾರೋ, ಅಂತವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶಿರಸಿಯಲ್ಲಿ 14 ಮಂದಿಗೆ ಪಾಸಿಟಿವ್:

ಶಿರಸಿ: ತಾಲೂಕಿನಲ್ಲಿ ಬುಧವಾರ 14 ಮಂದಿಗೆ ಕರೊನಾ ದೃಢಪಟ್ಟಿದ್ದು, 12 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ದೃಢವಾದ ಪ್ರಕರಣಗಳ ಪೈಕಿ ಟಿಎಸ್ಎಸ್ ಮಾರ್ಕೇಟ್ ಸಮೀಪ 1, ಚಿಪಗಿ 1, ಸುಪ್ರಸನ್ನ ನಗರ 1, ಮೆಣಸಿ ಕೋಟೆಮನೆ 1, ಅಂಡಗಿ 1, ಸದಾಶಿವಳ್ಳಿ 1, ಬನವಾಸಿ ರೋಡ್ 2, ಅಯ್ಯಪ್ಪ ನಗರ 1, ವಿದ್ಯಾನಗರ 1, ಗಾಂಧಿ ನಗರ 1, ಹುಬ್ಬಳ್ಳಿ ರೋಡ್ 1, ಹನುಮಂತಿಯಲ್ಲಿ ತಲಾ ಎರಡು ಕೇಸ್ ಕಾಣಿಸಿಕೊಂಡಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button