ಹಾಡುಹಗಲೇ ಜನನಿಬಿಡ ಪ್ರದೇಶದಲ್ಲಿ ಕಳ್ಳತನ

ವಿಡಿಯೋದಲ್ಲಿ ಸೆರೆಯಾಗಿದೆ ಕಳ್ಳರ ಕೈಚಳಕ

ಟೂತ್ ಪೇಸ್ಟ್ ಖರೀದಿ ನೆಪದಲ್ಲಿ ಅಂಗಡಿಗೆ ಬಂದರು
ಜ್ಯೂಸ್ ಬೇಕೆಂದು ಹೇಳಿ ಮಾಲೀಕನ ಗಮನ ಬೇರೆಡೆ ಸೆಳೆದರು

[sliders_pack id=”1487″]

ಕುಮಟಾ: ತಾಲೂಕಿನ ಪಾಂಡುರಂಗ ಇಂಟರ್‍ನ್ಯಾಶನಲ್ ಹೋಟೆಲ್ ಸಮೀಪ ಅಂಗಡಿಯೊಂದಕ್ಕೆ ಗ್ರಾಹಕರ ರೂಪದಲ್ಲಿ ಬಂದ ಖದೀಮರು ತಮ್ಮ ಕೈಚಳಕ ತೋರಿಸಿ 20 ರೂ ನಗದನ್ನು ಹಗಲು ಹೊತ್ತಿನಲ್ಲೆ ದರೋಡೆ ಮಾಡಿದ ಘಟನೆ ನಡೆದಿದೆ. ಈ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಾಂಡುರಂಗ ಹೋಟೆಲ್ ಸಮೀಪವಿರುವ ಅಣ್ಣಪ್ಪ ಭಂಡಾರಿ ಎಂಬುವವರ ಮಾಲೀಕತ್ವದಲ್ಲಿರುವ ಜನರ್ ಸ್ಟೋರ್‍ನಿಂದ 20 ಸಾವಿರ ರೂ ನಗದನ್ನು ಕಳ್ಳತನಮಾಡಲಾಗಿದೆ. ಈ ಒಂದು ಕಳ್ಳತನದ ದೃಶ್ಯ ಪಕ್ಕದ ಅಂಗಡಿಯೊಂದರ ಸಿ.ಸಿ ಕ್ಯಾಮರಾದಲ್ಲಿ ಸೇರೆಯಾಗಿದೆ.

ಅಣ್ಣಪ್ಪ ಭಂಡಾರಿ ಯವರು ಅಂಗಡಿಯ ಕೈಚಿಲದಲ್ಲಿ 20 ಸಾವಿರ ನಗದು ಇರಿಸಲಾಗಿದ್ದು, ಗ್ರಾಹಕರ ರೂಪದಲ್ಲಿ ಬಂದ ಕಿಡಿಗೇಡಿಗಳು ಆ ಒಂದು ನಗದನ್ನು ಗಮನಿಸಿ ಎಗರಿಸಿದ್ದಾರೆ. ಅಂಗಡಿಯಲ್ಲಿ ಕಾಲಿಯಾದಂತಹ ಸಾಮಗ್ರಿಗಳನ್ನು ತರುವ ಹಿನ್ನೆಲೆಯಲ್ಲಿ 20 ಸಾವಿರ ರೂ ಅನ್ನು ಒಗ್ಗೂಡಿಸಿ ಕೈಚೀಲವೊಂದರಲ್ಲಿ ಮಾಲೀಕ ಅಣ್ಣಪ್ಪ ಭಂಡಾರಿ ಇರಿಸಿದ್ದರು. ಮೊದಲಿಗೆ ಟೂತ್‍ಪೇಸ್ಟ್ ಖರೀದಿಯ ನೆಪದಲ್ಲಿ ಬಂದಂತಹ ವ್ಯಕ್ತಿ ಕೈಚೀಲದಲ್ಲಿ ಹಣ ಇರುವುದನ್ನು ನೋಡಿ, ನಂತರ ಮತ್ತೆರಡು ಬಾರಿ ಇನ್ನಿತರ ಸಾಮಗ್ರಿ ಖರೀದಿಯ ನೆಪದಲ್ಲಿ ಅಂಗಡಿಗೆ ಬಂದು ಹೋಗಿದ್ದಾನೆ.

ಪಕ್ಕಾ ಪ್ಲಾನಿಂಗ್ ಆದ ನಂತರ ಮತ್ತೆ ಅಂಗಡಿಗೆ ಬಂದು ಜ್ಯೂಸ್ ಬಾಕ್ಸ್ ನೀಡುವಂತೆ ಮಾಲೀಕರಿಗೆ ಹೇಳಿದ್ದು, ಜ್ಯೂಸ್ ಬಾಕ್ಸ್ ತರಲು ಮಾಲೀಕರು ಓಳಬಾಗಕ್ಕೆ ಹೋದಾಗ 20 ಸಾವಿರ ನಗದನ್ನು ಮಾಯಮಾಡಿದ್ದಾರೆ. ಈ ವಿಷಯದ ಕುರಿತಂತೆ ಅಂಗಡಿ ಮಾಲೀಕರಾದ ಅಣ್ಣಪ್ಪ ಭಂಡಾರಿಯವರು ಕುಮಟಾ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ, ಸಿ.ಸಿ ಟಿ.ವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಕೊಂಡ ಪೋಲಿಸರು ಕಳ್ಳರ ಹುಡುಕಾಟಕ್ಕೆ ಬಲೆಬಿಸಿದ್ದಾರೆ.

ಈ ಕುರಿತ ವಿಡಿಯೋ ಇಲ್ಲಿದೆ ನೋಡಿ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ,

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version