ಗೋಕರ್ಣ: ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ರಾಜ್ಯ ಸರ್ಕಾರದ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ರವರು ಕುಟುಂಬ ಸಮೇತರಾಗಿ ಆಗಮಿಸಿದ್ದರು. ಈ ವೇಳೆ ಮಹಾಬಲೇಶ್ವರನಿಗೆ ಗಂಗಾಭಿಷೇಕ, ನವಧಾನ್ಯ ಅಭಿಷೇಕ, ಸುವರ್ಣ ನಾಗಾಭರಣ ಪೂಜೆ ಮಾಡಿದರು. ಉಪಾಧಿವಂತ ಮಂಡಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಜಿ ಕೆ ಹೆಗಡೆಯವರು ಸಚಿವರಿಗೆ ಗೌರವ ಸಮರ್ಪಿಸಿದರು.
ಸಚಿವರು ದೇವಾಲಯದ ಸ್ವಚ್ಛತೆ, ಶಿಸ್ತು ಬದ್ಧತೆ ಮತ್ತು ಪೂಜಾ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತ್ಮಲಿಂಗ ವಿಶ್ವರೂಪ ದರ್ಶನದ ಆಸಕ್ತಿ ವ್ಯಕ್ತಪಡಿಸಿದರು.
ವಿಸ್ಮಯ ನ್ಯೂಸ್, ಗೋಕರ್ಣ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- Job: ಶೋರೂಮ್ ನಲ್ಲಿ ಉದ್ಯೋಗಾವಕಾಶ: ಆಕರ್ಷಕ ವೇತನ: ಇಂದೇ ಅರ್ಜಿ ಸಲ್ಲಿಸಿ
- ಭೀಕರ ರಸ್ತೆ ಅಪಘಾತ: ಬೈಕಿಗೆ ಬೆಂಕಿ : ಸ್ಥಳದಲ್ಲಿಯೇ ಸುಟ್ಟು ಕರಕಲಾದ ಬೈಕ್ ಸವಾರ : ಮತ್ತಿಬ್ಬರು ಗಂಭೀರ
- ಪದ್ಮಶ್ರೀ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು: ಕಾರವಾರ ಕ್ರಿಮ್ಸ್ ಗೆ ದಾಖಲು
- ಫಾರೆಸ್ಟ್ ಆಫೀಸ್ ಎದುರು ಆಕಸ್ಮಿಕ ಬೆಂಕಿ ಅವಘಡ : ಸುಟ್ಟು ಕರಕಲಾದ ಎರಡು ಪೆಟ್ಟಿಗೆ ಅಂಗಡಿಗಳು
- ನೀರಿನಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ತೆರಳಿದ ವೇಳೆ ದುರಂತ: ಆರು ಮಂದಿ ದುರ್ಮರಣ