Uttara Kannada
Trending

ಆಟೋರಿಕ್ಷಾ, ಬೈಕ್ ಡಿಕ್ಕಿ: ಬಾಲಕ ಸ್ಥಳದಲ್ಲೇ ಸಾವು

ತಂದೆ ಜೊತೆ ಆಟೋದಲ್ಲಿ ತೆರಳುತ್ತಿದ್ದ ಬಾಲಕ
ಅತೀ ವೇಗವಾಗಿ ಬಂದು ಡಿಕ್ಕಿಹೊಡೆದ ಬೈಕ್

ಕುಮಟಾ : ಬೈಕ್ ಹಾಗೂ ಆಟೋರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋರಿಕ್ಷಾದಲ್ಲಿದ್ದ ಆರು ವರ್ಷದ ಪುಟ್ಟ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಿರ್ಜಾನ್ ನಾಗೂರಿನ ಸಂತೆಗದ್ದೆ ಬಳಿ ನಡೆದಿದೆ. ತಾಲೂಕಿನ ಸಂತೆಗದ್ದೆ ನಿವಾಸಿ ತನ್ಮಯ್ ಸದಾನಂದ ಮಡಿವಾಳ ಮೃತಪಟ್ಟ ಬಾಲಕ. ಈತನು ತನ್ನ ತಂದೆ ಸದಾನಂದ ಶಂಕರ ಮಡಿವಾಳ ಜೊತೆ ಹೊಸ ಆಟೋರಿಕ್ಷಾದಲ್ಲಿ ಮಿರ್ಜಾನ ಕಡೆಯಿಂದ ಸಂತೆಗದ್ದೆ ತೆರಳುತ್ತಿರುವಾಗ ಎದುರಿನಿಂದ ಅತೀ ವೇಗವಾಗಿ ಬಂದ ಪ್ಲಸರ್ ಬೈಕ್ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಆಟೋರಿಕ್ಷಾದ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಪುಟ್ಟ ಬಾಲಕ ತನ್ಮಯ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ಅಪಘಾತದಲ್ಲಿ ಬೈಕ್ ಸವಾರ ಕೃಷ್ಣ ಮಡಿವಾಳ ಹಾಗೂ ಆಟೋರಿಕ್ಷಾ ಚಾಲಕ ಸದಾನಂದ ಮಡಿವಾಳ ಇವರಿಬ್ಬರೂ ಕೂಡ ಗಂಭೀರ ಗಾಯಗೊಂಡಿದ್ದು, ಇವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button