ಕುಮಟಾ: ಸಮುದ್ರದಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ವ್ಯಕ್ತಿಯೋರ್ವ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಗೋಕರ್ಣದ ಕುಡ್ಲೆ ಕಡಲ ತೀರದಲ್ಲಿ ನಡೆದಿದೆ. ಕೇರಳ ಮೂಲದ ವಿಶ್ವನಾಥ (30) ಮೃತ ವ್ಯಕ್ತಿ. ಈತ ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಗೆಳೆಯರ ಜೊತೆ ಸಮುದ್ರಲ್ಲಿ ಈಜಲು ತೆರಳಿದ್ದ. ಸಮುದ್ರದ ಈಜುತ್ತಿರುವಾಗ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಗೋಕರ್ಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವವನ್ನು ಸಾಗಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಗೋಕರ್ಣ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ವಿದ್ಯುತ್ ತಂತಿ ತಗುಲಿ ವಾಹನ ಸಂಪೂರ್ಣ ಭಸ್ಮ: ತಪ್ಪಿದ ಜೀವಹಾನಿ
- ಸೇತುವೆ ಕುಸಿಯಲು ನಿಜವಾದ ಕಾರಣ ಏನು? ಅಧಿಕಾರಿಗಳು ಹೇಳೋದು ಏನು?
- ಹೆಚ್ಚುತ್ತಲೇ ಇದೆ ಮಂಗನಕಾಯಿಲೆ: ಸಿದ್ದಾಪುರದಲ್ಲಿ ಮತ್ತೊಂದು ಸಾವು: ಮತ್ತಷ್ಟು ಆತಂಕ
- ಮಾರ್ಚ 30 ರ ಶನಿವಾರ ಹಾರವಾಡದಲ್ಲಿ ಶ್ರೀ ದುರ್ಗಾದೇವಿ ದೇವರ ವಾರ್ಷಿಕ ಪಲ್ಲಕ್ಕಿ ಉತ್ಸವ , ರಂಗ ಪಂಚಮಿ
- ಗಿರ್ ಹಸುವಿನ ಸಗಣಿಯಿಂದ ಮಾಡಿದ & ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪರಿಸರ ಸ್ನೇಹಿ ಪೇಂಟ್: ಬೆರಗುಗೊಳಿಸುವ ಇದರ ವಿಶೇಷತೆ ನೋಡಿ?