ಶಿರಸಿ: ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ ಕಾರ್ತಿಕ ಉತ್ಸವವು ಡಿಸೆಂಬರ್ 29 ರಿಂದ ಜನವರಿ 1ರ ವರೆಗೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ತಿಕ ಉತ್ಸವವನ್ನು ಸರಕಾರದ ಆದೇಶದಂತೆ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದಂತೆ ಕೀರ್ತನೆ,ಸಾಂಸ್ಕೃತಿಕ ಕಾರ್ಯಕ್ರಮ,ಕೋಲಾಟ, ಡೊಳ್ಳು ಕುಣಿತ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿರುತ್ತದೆ.
ಮಂಗಳವಾರದ “ದೀಪೋತ್ಸವ”ದಂದು ಶ್ರೀದೇವಿಯ ಪಲ್ಲಕ್ಕಿಯು ರಾತ್ರಿ 8 ಗಂಟೆಗೆ ದೇವಾಲಯದಿಂದ ಹೊರಟು ಜಾತ್ರಾ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿ ಪಲ್ಲಕ್ಕಿಯು ಶ್ರೀ ದೇವಸ್ಥಾನಕ್ಕೆ ಮರಳಿ ಬರುತ್ತದೆ. ತದನಂತರ ರಾತ್ರಿ 10 ಘಂಟೆಗೆ ಮಹಾಮಂಗಳಾರತಿಯೊಡನೆ ಪ್ರಸಾದ ವಿತರಣೆ ನಡೆಸಿ ಶ್ರೀ ದೇವಾಲಯವನ್ನು ಬಂದ್ ಮಾಡಲಾಗುವುದು. ಅದೇ ರೀತಿ ಜನವರಿ 1 ರಂದು ರಾತ್ರಿ 9 ಗಂಟೆಗೆ ದೀಪೋತ್ಸವ ಹಾಗೂ ರಾತ್ರಿ 10 ಗಂಟೆಗೆ ಮಹಾಮಂಗಳಾರತಿ ನೇರವೇರುವುದು.ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಮಾಡಿ ಶ್ರೀ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ ಎಂದು ಶ್ರೀ ದೇವಾಲಯದ ಧರ್ಮದರ್ಶಿಗಳಾದ ಡಾ ವೆಂಕಟೇಶ ನಾಯ್ಕ್ ಮಾಹಿತಿ ನೀಡಿದ್ದು, ಭಕ್ತರು ಸಹಕರಿಸುವಂತೆ ಕೋರಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- KSRTC ಬಸ್ ಡಿಕ್ಕಿ: ಆಸ್ಪತ್ರೆಗೆ ಬರುತ್ತಿದ್ದ ಕಾರಿನಲ್ಲಿದ್ದ ಗಂಡ ಸಾವು, ಹೆಂಡತಿ ಗಂಭೀರ
- ನಾಯಿ ಹೊತ್ತೊಯ್ಯಲು ಬಂದು ಬಾವಿಗೆ ಬಿದ್ದ ಚಿರತೆ!
- ಬಡತನದಲ್ಲಿ ಅರಳಿದ ಪ್ರತಿಭೆ: ವಾಲಿಬಾಲ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ ಗಿರೀಶ
- ಮೃತ ಕಡಲಾಮೆಯ ಎರಡು ಕಳೇಬರ ಕಡಲತೀರದಲ್ಲಿ ಪತ್ತೆ
- ತಪಾಸಣೆ ವೇಳೆ ಸಗಣಿ ವಾಸನೆ: ಬಯಲಾಯ್ತು ಅಕ್ರಮ ಜಾನುವಾರು ಸಾಗಾಟ