Follow Us On

WhatsApp Group
Important
Trending

ಗಂಡ ತನ್ನೊಂದಿಗೆ ಹೆಚ್ಚು ಸಮಯ ಕಳೆಯುವುದಿಲ್ಲ ಎಂಬುದನ್ನೇ ಮನಸ್ಸಿಗೆ ಹಚ್ಚಿಕೊಂಡು ಪತ್ನಿ ಸಾವಿಗೆ ಶರಣು

ಶಿರಸಿ: ಗಂಡ ತನ್ನೊಂದಿಗೆ ಹೆಚ್ಚು ಸಮಯ ಕಳೆಯುವುದಿಲ್ಲ. ಅಲ್ಲದೆ ತನ್ನೊಂದಿಗೆ ಸಾಕಷ್ಟು ಮಾತನಾಡುವುದಿಲ್ಲ ಎಂಬ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಯ ಗೃಹಿಣಿಯೊಬ್ಬಳು ಸಾವಿಗೆ ಶರಣಾದ ಘಟನೆ ಶಿರಸಿ ತಾಲೂಕಿನ ಇಂದಿರಾನಗರದಲ್ಲಿ ನಡೆದಿದೆ. ಈಕೆ ಕಳೆದ ಎರಡು ವರ್ಷಗಳಿಂದ ಪತಿಯೊಂದಿಗೆ ಇಂದಿರಾ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದಳು.

ಮೃತಳನ್ನು ಗಿಡಮಾವಿನಕಟ್ಟೆಯವರಾದ ಪಲ್ಲವಿ ವಿಜಯ ದೇವಾಡಿಗ ಎಂದು ಗುರುತಿಸಲಾಗಿದೆ. ತನ್ನ ಗಂಡ ತನ್ನ ಜೊತೆ ಹೆಚ್ಚು ಸಮಯ ಕಳೆಯುವುದಿಲ್ಲ ಎಂಬ ಸಣ್ಣವಿಷಯನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದಳು. ಇದರಿಂದಾಗಿ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಕಾಲಿಗಾಗಿ ಕಟ್ಟಲಾಗಿದ್ದ ಸೀರೆಯನ್ನು ಬಳಸಿಕೊಂಡು ಸಾವಿಗೆ ಶರಣಾಗಿದ್ದಾಳೆ. ಶಿರಸಿ ಪೊಲೀಸ್ ಠಾಣೆಯಲ್ಲಿ ಈ ಸಂಬoಧ ಪ್ರಕರಣ ದಾಖಲಾಗಿದೆ.

ಯಲ್ಲಾಪುರ: ತಾಲೂಕಿನ ಹಲಸ್ಕಂಡ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವ ಸಾವಿಗೆ ಶರಣಾಗಿದ ಘಟನೆ ನಡೆದಿದೆ. ಬಳಗಾರ ಶಾಲೆಗುಡ್ಡೆ ನಿವಾಸಿ ಪ್ರವೀಣ ಧರ್ಮ ನಾಯ್ಕ (28) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಯಲ್ಲಾಪುರದ ಅಡಿಕೆ ವಕಾರಿಯಲ್ಲಿ ಕೆಲಸ ಮಾಡುತ್ತಿದ್ದ ಇವನು ಮಂಗಳವಾರ ಬೆಳಿಗ್ಗೆ ಸಾವಿಗೆ ಶರಣಾಗಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾಗಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಬಾಡಿಗೆಗೆ ಸುಸಜ್ಜಿತವಾದ ಮಳಿಗೆ ಲಭ್ಯವಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಅಂಗಡಿ/ ಆಫೀಸ್ ಮಾಡಲು ಬಯಸುವವರು ಸಂಪರ್ಕಿಸಬಹುದು. ಕುಮಟಾ ಪಟ್ಟಣದ ಮಧ್ಯವರ್ತಿ ಸ್ಥಳದಲ್ಲಿ ಈ ಮಳಿಗೆಯಿದ್ದು, ರಸ್ತೆ, ಪಾರ್ಕಿಂಗ್, ನೀರು ಸೇರಿದಂತೆ ಎಲ್ಲಾ ಸೌಲಭ್ಯವಿದೆ. Bus stand ಗೂ ಸಮೀಪವೇ ಇದೆ. ಆಸಕ್ತರು ಸಂಪರ್ಕಿಸಿ: 9481274746


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button