Follow Us On

WhatsApp Group
Important
Trending

ಮದಿರೆ ಮತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಮಲಗಿದ! ರಂಪಾಟ, ರಾದ್ಧಾಂತ- ಗಲಾಟೆ! ಕರೆದುಕೊಂಡು ಬಂದರೂ ಮತ್ತೆ ಹೆದ್ದಾರಿಯಲ್ಲೇ ಮಲಗುತ್ತಿದ್ದ

ಹೊನ್ನಾವರ: ಮದಿರೆ ಮತ್ತಿನಲ್ಲಿರುವ ವ್ಯಕ್ತಿಗಳು ಮಾಡುವ ಅವಾಂತರ ಎಷ್ಟಿಷ್ಟಲ್ಲ. ಮದಿರೆ ಗುಂಗಿನಲ್ಲಿ ಮರವೇರಿ ಕುಳಿತಿಕೊಳ್ಳುವುದು, ವಿದ್ಯುತ್ ಕಂಬ ಹತ್ತುವುದು, ಕೂಗಾಡುವುದು, ಕಿರುಚಾಡುವುದು.. ಇದನ್ನೆಲ್ಲ ಕೇಳಿದ್ದೇವೆ. ಆದರೆ, ಈ ವ್ಯಕ್ತಿ ಕಂಠಪೂರ್ತಿ ಕೂಡಿದು, ರಾಷ್ಟ್ರೀಯ ಹೆದ್ದಾರಿಯಲ್ಲೇ ಮಲಗಿದ್ದಾನೆ. ಮದಿರೆ ಮತ್ತಿನಲ್ಲಿ ಇದ್ದ ವ್ಯಕ್ತಿಯೊಬ್ಬ ಮಾಡಿದ ರಂಪಾಟ, ಗಲಾಟೆಯಿಂದ ಸಾರ್ವಜನಿಕರು, ವಾಹನಸವಾರರು ಕ್ಷಣಕಾಲ ಆತಂಕಗೊಂಡಿದ್ದರು.

ಹೌದು, ಪಾನಮತ್ತನಾದ ವ್ಯಕ್ತಿಯೊಬ್ಬ ಸಾರ್ವಜನಿಕರು ಎಷ್ಟು ಹೇಳಿದ್ರು ಕೇಳದೆ, ರಾಷ್ಟ್ರೀಯ ಹೆದ್ದಾರಿ ಮೇಲೆ ಮಲಗಿ ರಾದ್ಧಾಂತ ಮಾಡಿದ ಘಟನೆ ಹೊನ್ನಾವರದ ಕರ್ಕಿನಾಕಾ ಬಳಿ ನಡೆದಿದೆ. ಸ್ಥಳೀಯರು, ಸಾರ್ವಜನಿಕರು ಹರಸಾಹಸ ಪಟ್ಟು ವಾಪಸ್ ಕರೆದುಕೊಂಡು ಹೋದರು ಮತ್ತೆ ಮತ್ತೆ ವಾಪಸ್ ಬಂದು ಹೆದ್ದಾರಿಯಲ್ಲಿ ಮಲಗುತ್ತಿದ್ದ. ಇದರಿಂದಾಗಿ ಈ ಭಾಗದಲ್ಲಿ ನೂರಾರು ಜನರು ಸೇರಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು.

ತಕ್ಷಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು, ಈತನನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದರು. ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಈತ ಕುಮಟಾದ ಚಿತ್ರಗಿ ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಕುಮಟಾ

Back to top button