
ಅಂಕೋಲಾ : ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ,ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೆಂಕಣಕೇರಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಗೌತಮ ಪ್ರಭಾಕರ ನಾಯ್ಕ(24) ಮೃತ ದುರ್ದೈವಿಯಾಗಿದ್ದು, ಮನೆಯಲ್ಲಿ ಯಾರು ಇರದ ವೇಳೆ ಅದಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಕೋವಿಡ್ ಲಾಕ್ಡೌನ್ ಕಾರಣ ಮನೆಯಿಂದಲೇ ಕಂಪನಿ ಕೆಲಸ ( ವರ್ಕ್ ಪ್ರಾಂ ಹೋಂ) ಮಾಡುತ್ತಿದ್ದು, ಸಾವಿಗೆ ಶರಣಾಗುವ ಪೂರ್ವವೂ ಕೆಲ ಹೊತ್ತು ಕಾರ್ಯ ನಿರ್ವಹಿಸಿದಂತಿದೆ ಎನ್ನುವುದು ಕೆಲ ಸ್ಥಳೀಯರ ಅಭಿಪ್ರಾಯವಾಗಿದೆ. ಮೃತ ಗೌತಮ ಶಾಂತ ಸ್ವಭಾವದ ಯುವಕ ನಾಗಿದ್ದು, ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಇರುತ್ತಿದ್ದು, ಆತನ ಆಕಸ್ಮಿಕ ನಿಧನದ ಸುದ್ದಿಗೆ ಊರಲ್ಲಿ ನೀರವ ಮೌನ ಆವರಿಸಿದಂತಿದೆ.
ಮೃತನ ತಾಯಿ ಶಿಕ್ಷಣ ಇಲಾಖೆಯಲ್ಲಿ ಸಿ. ಆರ್. ಪಿ.ಯಾಗಿ ಸೇವೆ ಸಲ್ಲಿಸುತ್ತಿದ್ದು,ಈ ಹಿಂದಿನ ಕಹಿ ಘಟನೆ ಮರೆತು, ಪತಿಯ ಸಾವಿನ ದುಃಖ ಮರೆಯುವ ಮುನ್ನವೇ,ಮುದ್ದಿನ ಮಗನನ್ನು ಕಳೆದುಕೊಂಡು ರೋದಿಸುವಂತಾಗಿರುವುದು ವಿಪರ್ಯಾಸವೇ ಸರಿ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಕೋಳಿ ಅಂಕದ ಅಡ್ಡೆಯ ಮೇಲೆ ದಾಳಿ: ಆರು ಮಂದಿ ಬಂಧನ
- ಅಂಕೋಲಾ ತಾಲೂಕಿನ ದೊಡ್ಡ ದೇವರೆಂದೇ ಖ್ಯಾತಿ ಪಡೆದಿರುವ ಶ್ರೀವೆಂಕಟರಮಣ ದೇವರ ತೇರು ಉತ್ಸವಕ್ಕೆ ಸಿದ್ಧತೆ
- ಹಿಂದೂ ಕಾರ್ಯಕರ್ತನ ಮೇಲೆ ನಾನು ಹಲ್ಲೆ ಮಾಡಿಲ್ಲ: ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
- ಕೇರಂ ಬೋರ್ಡ್ ಬಳಿ ಅವಿತುಕೊಂಡಿದ್ದ ನಾಗರಹಾವು: ಏನಾಯ್ತು ನೋಡಿ?
- ಅರ್ಥಪೂರ್ಣವಾಗಿ ನಡೆದ ‘ಶರಾವತಿ ಆರತಿ’ ಕಾರ್ಯಕ್ರಮ: ಗಂಗಾರತಿ ಮಾದರಿಯಲ್ಲಿ ಶರಾವತಿ ಆರತಿ