Important
Trending
ಮತ್ತೊಂದು ದುರಂತ: ನೀರಿನ ಸುಳಿಗೆ ಸಿಲುಕಿ ಈಜಲು ತೆರಳಿದ ಮೆಡಿಕಲ್ ವಿದ್ಯಾರ್ಥಿ ಸಾವು: ವಾರದಲ್ಲೇ ಜೀವಕಳೆದುಕೊಂಡರು ಆರು ಮಂದಿ
ಗೋಕರ್ಣ: ಪ್ರವಾಸಿಗರು ಈಜಲು ತೆರಳಿ ಸಾವನ್ನಪ್ಪುತ್ತಿರುವ ಪ್ರಕರಣ ಜಿಲ್ಲೆಯ ಕಡಲತೀರದಲ್ಲಿ ಹೆಚ್ಚುತ್ತಿದೆ. ಕಳೆದ ಒಂದು ವಾರದಲ್ಲೇ ಆರು ಪ್ರವಾಸಿಗರು ಮೃತಪಟ್ಟಿದ್ದಾರೆ.
ಇದೀಗ ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗ ಅಲೆಗಳ ರಭಸಕ್ಕೆ ಸಿಕ್ಕಿ ಮೃತಪಟ್ಟ ಘಟನೆ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ನಡೆದಿದೆ .
ಗೋಕರ್ಣಕ್ಕೆ ಆರು ಜನ ವಿದ್ಯಾರ್ಥಿಗಳು ಪ್ರವಾಸಕ್ಕೆ ಎಂದು ಬೆಂಗಳೂರಿನಿಂದ ಬಂದಿದ್ದರು. ಈ ವೇಳೆ ಎಲ್ಲಾ ಆರು ಪ್ರವಾಸಿಗರು ಕುಡ್ಲೆ ಕಡಲತೀರದಲ್ಲಿ ಈಜು ತೆರಳಿದ್ದಾರೆ. ಈಜಲು ತೆರಳಿದ ವೇಳೆ ಅಲೆಗೆ ಸಿಕ್ಕಿ ವಿಕ್ರಮ್ ಸಾವು ಕಂಡಿದ್ದಾನೆ.
ವಿಕ್ರಮ್ ಬೀದರ್ ಜಿಲ್ಲೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ಗೋಕರ್ಣ