ಫ್ಯಾಕ್ಟರಿ ಯಾಕೆ ಆಗಿಲ್ಲ ಎಂದರೆ ಇಡೀ ಜಿಲ್ಲೆಯಲ್ಲಿ ಜಾಗವೇ ಇಲ್ಲ ಏನ್ನುತ್ತೀರಿ, ಹಿರೆಗುತ್ತಿಯಲ್ಲಿ 1800 ಏಕರೆ ಜಾಗ ಇದೆ KIADB ಜಾಗ ಅನಾಥವಾಗಿ ಇರುವುದು ಗೊತ್ತಿಲ್ಲವೆ?, ಮೂರೂರು ಗುಡ್ಡ 5000 ಎಕರೆ ಇದೆ , ದಿವಗಿ ಗುಡ್ಡ 500 ಎಕರೆ ಇದೆ , ಕಂದಾಯ ಭೂಮಿ ಕೊಟ್ಟರೆ ಫಾರೆಸ್ಟ್ ಇಲಾಖೆಯವರು ಬದಲಾಯಿಸಿ ಕೊಡುತ್ತಾರೆ, ಒಂದು ಎಕರೆ ಜಾಗದ ಗಾರ್ಮೆಂಟ್ ಫ್ಯಾಕ್ಟರಿ ಯಲ್ಲಿ 500 ಜನರಿಗೆ ಉದ್ಯೋಗ ಕೊಡಬಹುದು , ಶಿರಸಿ ಭಾಗದಲ್ಲಿ 5 ರಿಂದ 10 ಎಕರೆ ಫ್ಯಾಕ್ಟರಿ ಮಾಡುವ ಜಾಗ ಬಹಳಷ್ಟಿದೆ, ಮಾಡಿದ್ದರೆ ನಮ್ಮ ಮನೆ ಮಕ್ಕಳಿಗೆ ಉದ್ಯೋಗ ಸಿಗುತ್ತಿತ್ತಲ್ಲವೆ?ಎಲ್ಲಿಯೂ ಜಾಗದ ಕೊರತೆ ಇಲ್ಲ , ಇಚ್ಛಾ ಶಕ್ತಿ ಕೊರತೆ ಅಷ್ಟೇ ಎಂದರು
ಮಂಗಳೂರಿನ K S ಹೆಗ್ಡೆ ಆಸ್ಪತ್ರೆಗೆ ವಿಶೇಷ ಬಸ್ ಬಿಡುವುದು ಅಭಿವೃದ್ಧಿಯೇ?
ನಮ್ಮ ಊರಲ್ಲಿ ಅಸ್ಪತ್ರೆ ಕಟ್ಟುವುದು ಅಭಿವೃದ್ಧಿಯೇ? ಯೋಚಿಸಿ. ಅಭಿವೃದ್ಧಿ ನೋಡಲು ನನಗೆ ಪ್ರವಾಸ ಮಾಡಿ ಎನ್ನುತ್ತೀರಿ, ಪ್ರವಾಸ ಯಾಕೆ ಸ್ವಾಮಿ, ನಿಮ್ಮ ಕಚೇರಿಯ ಮುಂದಿರುವ ‘ನೆಮ್ಮದಿ ಕುಟೀರ ‘ಕ್ಕೆ ಒಮ್ಮೆ ಹೋಗಿ ಸಾಕು. ಪ್ರತಿನಿತ್ಯ ಬರುವ ಹೆಣಗಳನ್ನ ನೋಡಿ, 20 ರಿಂದ 30 ವರ್ಷದ ಯುವಕರು ವಾಹನ ಅಪಘಾತ ಆಗಿ ಸರಿಯಾಗಿ ಚಿಕಿತ್ಸೆ ಸಿಗದೆ, ಇನ್ನೂ ಕೆಲವರು ಹೃದಯಾಘಾತ ಆಗಿ 5 ಘಂಟೆ ಪ್ರಯಾಣ ಮಾಡಲಾಗದೆ ಸಾಯುತ್ತಿದ್ದಾರೆ, ತಾವು ಆ ಅಭಿವೃದ್ಧಿ ಯನ್ನ್ ಕಣ್ಣಾರೆ ನೋಡಬಹುದು.
ಇತ್ತೀಚೆಗೆ ಯಡಳ್ಳಿ ರಿಕ್ಷಾ ಚಾಲಕ ಕುಟುಂಬ ಅಪಘಾತ ಆದಾಗ ಶಿರಸಿಯಲ್ಲಿ ಚಿಕಿತ್ಸೆ ನೀಡದೆ ಹುಬ್ಬಳ್ಳಿಗೆ ಕಳಿಸಿದ್ದಾರೆ, ಆ ತಾಯಿಗೆ 2 ಘಂಟೆ ಒಳಗಾಗಿ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದಳು, ನಾನು ಆ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದೇನೆ, ಆ ತಾಯಿಯ ಶರೀರ ಬೆಂಕಿಯಲ್ಲಿ ಸುಡುವಾಗ ನನ್ನ ರಕ್ತ ಕುದಿಯಲು ಪ್ರಾರಂಭಿಸಿತು.
ನನ್ನ ಜಿಲ್ಲೆಯಲ್ಲಿ ಒಂದೂ ಸರಿಯಾದ ಅಸ್ಪತ್ರೆ ಇಲ್ಲ ಎಂದು ಕಣ್ಣೀರು ಬಂತು, ನಾನು ಶಪಥ ಮಾಡಿದ್ದೇನೆ. ನನ್ನ ಜಿಲ್ಲೆಗೆ ಸರಿಯಾದ ಅಸ್ಪತ್ರೆ -ಮೆಡಿಕಲ್ ಕಾಲೇಜು ಆಗೋವರೆಗೂ ಹೊರಾಡುತ್ತೇನೆ ಮತ್ತು ನನ್ನ ಕೊನೆ ಉಸಿರು ಇರೋ ವರೆಗೂ ಹೋರಾಡುತ್ತೇನೆ. ಕಾಲ ಬದಲಾಗಿದೆ ಸ್ವಾಮಿ, ಆರೋಪ – ಪ್ರತ್ಯಾರೋಪ ನಾವುಗಳು ಮಾಡಿಕೊಂಡರೆ ಏನೂ ಪ್ರಯೋಜನ ಇಲ್ಲ, ಸಾಧನೆ ಮಾಡಬೇಕು, ನನಗೆ ಸ್ಪಷ್ಟವಾದ ಗುರಿ ಇದೆ , ಗುರುವಿನ ಆಶೀರ್ವಾದ ಇದೆ, ಸಾಧನೆ ಮಾಡೆ ಮಾಡುತ್ತೇನೆ ಎಂದರು
ನಾನು ಶ್ರೀ ದೀಪಕ್ ದೊಡ್ಡುರ್ ರವರಲ್ಲಿ ಕೈ ಮುಗಿದು ಕೇಳುತ್ತೇನೆ, ನಿಮಗೆ ದೇಶಪಾಂಡೆಯವರು ಬಹಳ ಆತ್ಮೀಯರು, ನೀವು ಹೇಳಿದರೆ ಕೇಳುತ್ತಾರೆ, ಒಂದು ಸಹಾಯ ಕೇಳಿ ಅವರಲ್ಲಿ ಅಸ್ಪತ್ರೆಗಾಗಿ ಸ್ವಂತ ಹಣ ಖರ್ಚು ಮಾಡಲು ಇಷ್ಟ ಇಲ್ಲ ಅಂದರೆ ಬಿಡಿ, ಅವರಿಗೆ ನಮ್ಮ ಜಿಲ್ಲೆ ಅಧಿಕಾರ, ಅಸ್ತಿತ್ವ ಎಲ್ಲ ಕೊಟ್ಟಿದೆ ಅಲ್ಲವೇ? ದೇಶಪಾಂಡೆ ಸಾಹೇಬರಿಗೆ ನಮ್ಮ ದೇಶದ ಅಂಬಾನಿ, ಅದಾನಿಯಿಂದ ಹಿಡಿದು ಇನ್ಫೋಸಿಸ್ ಸಂಸ್ಥೆಯ ಮಾಲೀಕರ ವರೆಗೆ ಎಲ್ಲರೂ ಸ್ನೇಹಿತರೇ, ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಶಿರಸಿ ಮೂಲದ ಶ್ರೀ ನಂದನ್ ನೀಲೇಕಣಿಯವರು ಮುಂಬಯಿ I I T ಗೆ 340 ಕೋಟಿ ರೂಪಾಯಿ ದಾನ ಮಾಡಿದ್ದಾರೆ ನಾವೆಲ್ಲ ಪತ್ರಿಕೆಯಲ್ಲಿ ಓದಿದ್ದೇವೆ, ಹೀಗೆ ಎಲ್ಲ ಕಂಪನಿಯಯಲ್ಲಿ CSR ಪಂಡ್ 2 % ಇರತ್ತೆ. ಅದನ್ನು ಪ್ರತೀ ವರ್ಷ ದಾನ ಮಾಡುತ್ತಿರುತ್ತಾರೆ, ಮಾಡಲೇ ಬೇಕು , ದೇಶಪಾಂಡೆ ಯವರು ಒಂದು ಮಾತನ್ನು ಇಬ್ಬರು ಸ್ನೇಹಿತರಿಗೆ ಹೇಳಿದರೆ 500 ಕೋಟಿ ಹಣ ಒಂದು ತಿಂಗಳಲ್ಲಿ ಸಂಗ್ರಹ ಆಗುತ್ತದೆ. ಸಾಹೇಬರ ಸ್ನೇಹಿತರು ತೆರಿಗೆ ಕಟ್ಟುವ ಹಣ ನಮಗೆ ಕೊಟ್ಟರೆ ನಾವೂ ಸ್ವಾಭಿಮಾನ ದಿಂದ ನಿಟ್ಟೆ K S ಹೆಗ್ಡೆ ತರಹ ಅಸ್ಪತ್ರೆ ನಿರ್ಮಿಸಿ ಸ್ವಾಭಿಮಾನಿಯಾಗಿ ಬದುಕೋಣ, ನಿಮ್ಮ ಕುಟುಂಬ, ಬಂಧು ಬಳಗ ಇಲ್ಲಿದೆ ಎಂಬುದನ್ನ ಮರೀಬೇಡಿ, ಹೇಗಾದರೂ ಮಾಡಿ ಒಂದು ಒಳ್ಳೆಯ ಅಸ್ಪತ್ರೆ ನಿರ್ಮಿಸಿದರೆ ಎಲ್ಲರಗೂ ಸಹಾಯ ಆಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ
Vishnu HegdeSaturday, November 18, 2023, 4:19 PMLast Updated: Saturday, November 18, 2023, 4:19 PM