Important
Trending

ನೀರಿನಲ್ಲಿ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಿದ ಸಾಹಸಿ ಯುವಕ

ಕುಮಟಾ: ತಾಲೂಕಿನ ವನ್ನಳ್ಳಿ ಸಮುದ್ರ ತೀರದಲ್ಲಿ ಈಜಲು ತೆರಳಿದ್ದ ಗದಗ್ ಮೂಲದ ಪ್ರವಾಸಿ ಯುವತಿನ್ನು ಕರಾವಳಿ ಪಡೆಯ ಸಾಹಸಿ ಯುವಕ ಉದಯ ಹರಿಕಂತ್ರ ಅವರು ರಕ್ಷಿಸಿದ್ದಾರೆ. ಪ್ರವಾಸಕ್ಕೆಂದು ಬಂದಿದ್ದ ವೇಳೆ ಗದಗ ಮೂಲದ ಯುವತಿಯು ವನ್ನಳ್ಳಿ ಬೀಚ್‌ನಲ್ಲಿ ಈಜುತ್ತಿರುವಾಗ ಅಲೆಯ ಸೆಳೆತಕ್ಕೆ ಕೊಚ್ಚಿಹೊಗುತ್ತಿದ್ದು, ಈ ವೇಳೆ ಕರಾವಳಿ ಕಾವಲು ಪಡೆಯ ಉದಯ ಹರಿಕಂತ್ರ ಅವರು ತಮ್ಮ ಪ್ರಾಣದ ಹಂಗನ್ನು ತೊರೆದು ಯುವತಿಯ ಪ್ರಾಣವನ್ನು ರಕ್ಷಿಸಿದ್ದಾರೆ. ಯುವತಿಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಉದಯ ಹರಿಕಂತ್ರ ಅವರಿಗೆ ಸಾರ್ವಜನಿಕ ವಲಯದಿಂದ ಹಾಗೂ ಪ್ರವಾಸಿ ಯುವತಿಯ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button