Important
Trending

ಕಲಗ ತೆಗೆಯಲು ಹೋಗಿದ್ದ ವೇಳೆ ತಾಯಿ, ಮಗಳ ದುರ್ಮರಣ: ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲು

ಅಂಕೋಲಾ: ಕಲಗ ತೆಗೆಯಲು ಹೋಗಿದ್ದ ತಾಯಿ ಮತ್ತು ಮಗಳು ಆಕಸ್ಮಿಕವಾಗಿ ಸಮುದ್ರ ನೀರುಪಾಲಾಗಿ, ಮೃತಪಟ್ಟ ಧಾರುಣ ಘಟನೆ ತಾಲೂಕಿನ ಬೈತಖೋಲ್ ಪ್ರದೇಶದಲ್ಲಿ ಸಂಭವಿಸಿದೆ. ಅಂಕೋಲಾ ತಾಲೂಕಿನ ಅವರ್ಸಾ ಸಕಲಬೇಣ ನಿವಾಸಿ ರೇಣುಕಾ ತಿಮ್ಮಪ್ಪ ಗೌಡ(52) ಮತ್ತು ಸುಜಾತಾ ಸರಾಣಿಯಾ ( 33 )ಎನ್ನುವವರೇ ಮೃತಪಟ್ಟ ದುರ್ದೈವಿ ತಾಯಿ ಮತ್ತು ಮಗಳಾಗಿದ್ದಾರೆ.

ಅಂಕೋಲಾದ ರೇಣುಕಾ ಗೌಡ ಇವಳು ತನ್ನ ತಾಯಿ ಮನೆ ಕಾರವಾರದ ಬೈತಖೊಲಗೆ ಹೋದವಳು, ಬೆಳಿಗ್ಗೆ ತನ್ನ ಮಗಳೊಂದಿಗೆ ಖುಡ್ಸಿ ಸಮುದ್ರ ದಂಡೆಗೆ ಹೋಗಿ ಅಲ್ಲಿ ಕಲಗಾ ಚಿಪ್ಪು ಒಡೆಯುತ್ತಿರುವಾಗ, ಅಕಸ್ಮಾತ ಬಂದ ಸಮುದ್ರದಲೆಗಳ ರಭಸಕ್ಕೆ ಸಿಲುಕಿ,ಆಯತಪ್ಪಿ ಇಬ್ಬರೂ ಸಮುದ್ರ ನೀರು ಪಾಲಾದರು ಎನ್ನಲಾಗಿದೆ.

ಸುದ್ದಿ ತಿಳಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು, ಸ್ಥಳೀಯರು ಮತ್ತು ಪೊಲೀಸರು, ನೀರಿನಲ್ಲಿ ಬಿದ್ದ ಮಹಿಳೆಯರ ಪ್ರಾಣ ರಕ್ಷಣೆಗೆ ಮುಂದಾಗಿ, ನೀರಿನಿಂದ ಅವರನ್ನು ಮೇಲೆತ್ತುವ ಕಾರ್ಯಚರಣೆ ನಡೆಸಿದರಾದರೂ,ಆ ವೇಳೆಗಾಗಲೇ ತಾಯಿ ಮತ್ತು ಮಗಳ ಪ್ರಾಣಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button