ವದ್ಧ ನಾಪತ್ತೆ: ಈತನ ಕುರಿತು ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ

ಭಟ್ಕಳ ತಾಲೂಕಿನ ಕಾಯ್ಕಿಣಿಯ ವೃದ್ಧರೋರ್ವರು ನಾಪತ್ತೆಯಾಗಿರುವ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಟ್ಕಳ ತಾಲೂಕಿನ ಕಾಯ್ಕಿಣಿ ಬಸ್ತಿ ದೇವಿಕಾನ್‌ನ 68 ವರ್ಷದ ವೃದ್ಧ ಸೋಮಯ್ಯ ದುರ್ಗಯ್ಯ ದೇವಡಿಗ ಎನ್ನುವವರು ನಾಪತ್ತೆಯಾದವರಾಗಿದ್ದಾರೆ. 

ಇವರು ಮೇ 25ರಂದು ಬೆಳಿಗ್ಗೆ 06-00 ಗಂಟೆಗೆ ಬಸ್ತಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು, ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಅವರ ಹತ್ತಿರ ಮೊಬೈಲ್ ಇಲ್ಲದೇ ಇರುವುದರಿಂದ ಮಾಹಿತಿ ಸಿಗದ ಕಾರಣ ಮನೆಯ ಜನರು ಸೇರಿ ಅಕ್ಕಪಕ್ಕದ ಊರಿನಲ್ಲಿ, ಸಂಬಂಧಿಕರಲ್ಲಿ ಚೌಕಾಶಿ ಮಾಡಿದರೂ ಸುಳಿವು ಸಿಕ್ಕಿಲ್ಲ.

ಆದ್ದರಿಂದ 4 ದಿನಗಳ ಬಳಿಕ ರವಿವಾರದಂದು ವೃದ್ಧನ ಪುತ್ರ ಮಹಾಬಲೇಶ್ವರ ಅವರು ಮುರುಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಉದಯ ಎಸ್ ನಾಯ್ಕ ಭಟ್ಕಳ

Exit mobile version