ಲಾರಿ, ಬೈಕ್‌ ನಡುವೆ ಭೀಕರ ಅಪಘಾತ: ಬೈಕ್‌ನಲ್ಲಿ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಸಾವು

ಅಂಕೋಲಾ: ರಾ.ಹೆ 63ರಲ್ಲಿ ಹೊನ್ನಳ್ಳಿಯ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕಲ್ಲಿ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

ಶಿರಗುಂಜಿಯ ಸಗಡೇಬೇಣ ನಿವಾಸಿ ಬೊಮ್ಮಯ್ಯ ರಾಮ ಗೌಡ (30) ಮೃತ ವ್ಯಕ್ತಿಯಾಗಿದ್ದು, ಈತ ಕಟ್ಟಡ ಕೆಲಸದ ನಿಮಿತ್ತ ಬೈಕ್ (ಕೆ.ಎ 30 ಯು 4625) ಮೇಲೆ ತೆರಳುತ್ತಿದ್ದಾಗ, ಅರಣ್ಯ ಇಲಾಖೆಯ ಸಸಿಗಳನ್ನು ತುಂಬಿ ಹೊರಟಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಅದೇ ಬೈಕ್ ಮೇಲಿದ್ದ ಇನ್ನೋರ್ವ ಸರಳೇಬೈಲನ ಮಂಜು ತುಳುಸು ಗೌಡ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಅವನನ್ನು ಅಂಬುಲೆನ್ಸ್ ಮೂಲಕ ಕಾರವಾರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪಿ. ಎ ಸೈ ಈ ಸಿ ಸಂಪತ್ ಫಟನಾ ಸ್ಥಳಕ್ಕೆ ಭೇಟಿ ನೀಡಿದರು. ಪೋಲೀಸ್ ಸಿಬ್ಬಂದಿಗಳು ಹೆದ್ದಾರಿಯಲ್ಲಿ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು. ಬೊಮ್ಮಯ್ಯ ಗೌಡನ ಮೃತದೇಹ ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ ವಿಜಯ ಕುಮಾರ ನಾಯ್ಕ, ಬೊಮ್ಮಯ್ಯ ನಾಯ್ಕ ಮತ್ತಿತರರು ಸಹಕರಿಸಿದರು. ಸಿಪಿಐ ಕೃಷ್ಣಾನಂದ ನಾಯಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಿದ್ದಾರೆ.

ಅಪಘಾತ ಪಡಿಸಿದ ಲಾರಿ (ಕೆ.ಎ 20, ಎ6925)ಅಗಸೂರಿನ ಶಾಂತಾರಾಮ ನಾಯ್ಕರಿಗೆ ಸೇರಿದ್ದು, ಅವರೇ ಚಾಲನೆ ಮಾಡುತ್ತಿದ್ದ ವೇಳೆ ಈ ಅಚಾತುರ್ಯದ ಅಪಘಾತ ನಡೆದಿದೆ ಎನ್ನಲಾಗಿದೆ. ಮೃತ ದುರ್ದೈವಿಯು ಇತ್ತೀಚೆಗಷ್ಟೇ ಮದುವೆಯಾಗಿದ್ದು, ಕುಟುಂಬ ವರ್ಗ ಹಾಗೂ ಊರಿನಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ.

ಅಂತೆಯೇ ಈ ಬಡ ಕುಟುಂಬಕ್ಕೆ ಮಾನವೀಯ ನೆರವಿನ ಅಗತ್ಯತೆಯಿದೆ. ಶಾಸಕಿ ರೂಪಾಲಿ ನಾಯ್ಕ ಘಟನೆ ಕುರಿತು ಶೋಕ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೊಲಾ

Exit mobile version