Follow Us On

WhatsApp Group
Important
Trending

ಸೆಲ್ಪಿ ತೆಗೆಯಲು ಹೋದ ವೇಳೆ ಅವಾಂತರ: ಕಾಲುಜಾರಿ ಬಿದ್ದು ಯುವಕ‌‌ ಕಣ್ಮರೆ

ಕುಮಟಾ: ಸೆಲ್ಫಿ ತೆಗೆಯುವಾಗ ಎಚ್ಚರತಪ್ಪಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲೂ ಕೂಡಾ ಇಂತಹದೇ ಘಟನೆ ನಡೆದಿದೆ. ಹೌದು, ಇಂದು ಕುಮಟಾ ಕಡಲತೀರದಲ್ಲಿ ಸೆಲ್ಪಿ ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ಯುವಕ ನೀರಿನಲ್ಲಿ ಕಣ್ಮರೆಯಾಗಿದ್ದಾನೆ.

ಪಟ್ಟಣದ ಹೆಡ್ ಬಂದರ್‌ನ ಕಡಲತೀರದಲ್ಲಿ ಬಂಡೆಗಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆಯಲು ಯುವಕ ಮುಂದಾಗಿದ್ದಾನೆ. ಈ ವೇಳೆ ಯುವಕ ಆಕಸ್ಮಿಕವಾಗಿ ಕಾಲು ಜಾರಿಬಿದ್ದು, ಸಮುದ್ರ ಪಾಲಾಗಿದ್ದಾನೆ ಎನ್ನಲಾಗಿದೆ. ಇದನ್ನು ತಿಳಿದ ಸ್ಥಳೀಯರು ಕುಮಟಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಸಮುದ್ರ ಪಾಲಾದ ಯುವಕ ಪತ್ತೆಯಾಗಿಲ್ಲ. ಅಗ್ನಿ ಶಾಮಕ ಮತ್ತು ಕರಾವಳಿ ಪಡೆಯ ಸಿಬ್ಬಂದಿಯು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂಬ ಮಾಹಿತಿ ಬಂದಿದೆ.

ಸೆಲ್ಪಿ ತೆಗೆಯಲು ಮುಂದಾದ ಯುವಕನ ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ, ಈ ಸ್ಕೂಟರ್ ಬೆಂಗಳೂರಿನ ಯುವತಿಯ ಹೆಸರಿನಲ್ಲಿರುವುದು ಬೆಳಕಿಗರ‌ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Back to top button