Important
Trending

ಪ್ರವಾಸಕ್ಕೆ ಬಂದಿದ್ದ ಬಸ್ಸೊಂದು ಮರಳಿನಲ್ಲಿ ಸಿಲುಕಿ ಪರದಾಡಿದ ಪ್ರವಾಸಿಗರು

ಕಾರವಾರ: ಪ್ರವಾಸಕ್ಕೆ ಬಂದಿದ್ದ ಬಸ್ಸೊಂದು ಮರಳಿನಲ್ಲಿ ಸಿಲುಕಿದ ಪರಿಣಾಮ ಪ್ರವಾಸಿಗರು ಪರದಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಕುಂದಾಪುರದಿoದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆತಂದಿದ್ದ ಬಸ್ಸು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆ ಎದುರು ನಿಲ್ಲಿಸಲು ಮುಂದಾಗಿತ್ತು. ಈ ವೇಳೆ ಮರಳಿನಲ್ಲಿ ಬಸ್ಸಿನ ಹಿಂಬದಿ ಟಯರ್ ಸಿಲುಕಿಕೊಂಡಿದ್ದು ಚಾಲಕ ಎಷ್ಟೇ ಪ್ರಯತ್ನಿಸಿದರೂ ಬಸ್ಸನ್ನ ಮೇಲಕ್ಕೆತ್ತಲು ಸಾಧ್ಯವಾಗಿಲ್ಲ. ಕೊನೆಗೆ ಪ್ರವಾಸಿಗರೇ ಸೇರಿ ತಳ್ಳುವ ಮೂಲಕ ಹರಸಾಹಸಪಟ್ಟು ಮರಳಿನಲ್ಲಿ ಸಿಲುಕಿದ್ದ ಬಸ್ಸನ್ನ ಮೇಲಕ್ಕೆತ್ತಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button