Focus News
Trending

ಅಂಗಡಿಗೆ ಕನ್ನ: ಸರಣಿ ಕಳ್ಳತನಕ್ಕೆ ಯತ್ನ : ನಾಲ್ಕೇ ದಿನದಲ್ಲಿ ಕಳ್ಳರನ್ನು ಬಂಧಿಸಿದ ಪೊಲೀಸರು

ಶಿರಸಿ: ನಗರದಲ್ಲಿ ಲಾಕ್ ಡೌನ್ , ಬಂದ್ ಮಧ್ಯೆ ಅಂಗಡಿ ಕಳ್ಳತನ ಮಾಡಿದ್ದ ನಾಲ್ವರನ್ನು ಶಿರಸಿ ನಗರ ಪೂಲೀಸರು ಬಂಧಿಸಿದ್ದಾರೆ. ಇದೇ ತಿಂಗಳ ಜೂನ್ 6 ರಂದು ಇಲ್ಲಿನ
ಕೃಷ್ಣ ಮೆಡಿಕಲ್ ಸ್ಟೋರ್ ಕಳ್ಳತನ ನಡೆಸಿದ್ದರು ದುಷ್ಕರ್ಮಿಗಳು.

ಈ ವೇಳೆ ಲ್ಯಾಪ್ ಟಾಪ್ ಮತ್ತು 20 ಸಾವಿರ ರೂ. ನಗದು ಕಳ್ಳತನ ಮಾಡಿದ್ದರು. ಇದಲ್ಲದೇ ಅಕ್ಕಪಕ್ಕದ ಮಳಿಗೆಗಳಿಗೂ ಕನ್ನ ಹಾಕಿದ್ದರು. ಆದರೆ ಏನೂ ಸಿಗದೇ ಬರಿಗೈಲಿ ಮರಳಿದ್ದರು.

ಶಿರಸಿ ಕರಿಗುಂಡಿಯ ಭರತ ಗಣಪತಿ ನಾಯ್ಕ (20),ಕೋಟೆಗಲ್ಲಿಯ ಪ್ರಕಾಶ ಗುಡ್ಡಪ್ಪ ತಳವಾರ(22) ಮತ್ತು ಅಪ್ರಾಪ್ತ ಬಾಲಕರು ಬಂಧಿತ ಆರೋಪಿಗಳು.
ವಿಚಾರಣೆ ವೇಳೆ ಶಿರಸಿ ಸೇರಿದಂತೆ ಇತರೆಡೆ ಹಲವು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ನಾಲ್ಕೇ‌ ದಿನದಲ್ಲಿ ಕಳ್ಳರನ್ನು ಬಂಧಿಸಿದ ಶಿರಸಿ ನಗರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಸ್ಮಯ ನ್ಯೂಸ್ ಶಿರಸಿ

Back to top button