ಮಗಳೊಂದಿಗೆ ಸೇರಿ ಅಳಿಯನನ್ನೇ ಕೊಂದ‌ ಕುಟುಂಬದವರು: ಪೊಲೀಸರಿಗೆ ದೂರ ಕೊಟ್ಟ ಹೆಂಡತಿ ನಾಟಕ ಮಾಡಿದ್ದೇಕೆ? ಅಷ್ಟಕ್ಕೂ ನಡೆದಿದ್ದೇನು?

ಯಲ್ಲಾಪುರ: ಪತ್ನಿಯೇ ತನ್ನ ಕುಟುಂಬದವರೊoದಿಗೆ ಸೇರಿಕೊಂಡು ಗಂಡನನ್ನು ಸಾಯಿಸಿ, ಮೃತದೇಹವನ್ನು ನಾಪತ್ತೆ ಮಾಡಿದ್ದಾರೆ ಎಂಬ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದನ್ನು ಬೆನ್ನು ಹತ್ತಿ ಹೋದ ಪೊಲೀಸರು ಭಯಾನಕ ರಹಸ್ಯವೊಂದನ್ನು ಹೊರತೆಗೆದಿದ್ದಾರೆ.

ಹೌದು, ತನ್ನ ಗಂಡ ಕಾಣೆಯಾದ ಬಗ್ಗೆ ಜೂನ್ 21 ರಂದು ಹೆಂಡತಿಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆದರೆ ಇದೀಗ ಪ್ರಕರಣಕ್ಕೆ ಹೊಸ ಟ್ಟಿಸ್ಟ್ ಸಿಕ್ಕಿದೆ.

ಆಸ್ತಿ ವಿಚಾರದಲ್ಲಿ ಸಣ್ಣದಾಗಿ ಕಾಣಿಸಿಕೊಂಡಿದ್ದ ವಿಚಾರ ಕೊಲೆಯಲ್ಲಿ ಅಂತ್ಯ ಕಂಡಿದೆ. ರಾಜೇಶ ನಾಯ್ಕ ಮೃತ ವ್ಯಕ್ತಿಯಾಗ. ಆಸ್ತಿ ವಿಚಾರವಾಗಿ ಅತ್ತೆ,ಮಾವ ಹೆಂಡತಿ, ಮತ್ತು ಭಾವನೊಂದಿಗೆ ಜಗಳ ತೆಗೆದಿದ್ದು ಈತ ಎನ್ನಲಾಗಿದ್ದು, ಇದರಿಂದ ಬೇಸತ್ತ ಕುಟುಂಬ ಹೊಡೆದು ಸಾಯಿಸಿದೆ ಎನ್ನಲಾಗಿದೆ.

ಇದೀಗ ಕೊಲೆ ಪ್ರಕರಣದಲ್ಲಿ ಶ್ವೇತಾ ರಾಜೇಶ ನಾಯ್ಕ (29), ದೀಪಕ ಬುದ್ದಾ ಮರಾಠಿ (53),ಗಂಗಾಧರ ದೀಪಕ ಮರಾಠಿ (26),ಯಮುನಾ ದೀಪಕ ಮರಾಠಿ (50) ಬಂಧಿಸಲಾಗಿದೆ.

ಇವರೆಲ್ಲರೂ ಸೇರಿ ಕೊಲೆ ಮಾಡಿದ್ದಲ್ಲದೇ ಪೋಲೀಸರ ದಾರಿ ತಪ್ಪಿಸಲು ತಾವೇ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು.ಮೃತ ರಾಜೇಶನ ಶವ ಬೆಟ್ಟದ ಪ್ರದೇಶದಲ್ಲಿ ಸಂಶ್ಕಾರ ಸಹ ಮಾಡಿದ್ಧಾರೆ ಎನ್ನಲಾಗಿದ್ದು, ಬೈಕ್,ಮೊಬೈಲ್ ಮತ್ತು ಚಪ್ಪಲಿಯನ್ನು , ದೆಹಳ್ಳಿಯ ಬೆಟ್ಟದ ಪ್ರದೇಶದಲ್ಲಿ ಎಸೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅನೈತಿಕ ಸಂಬoಧದ ಕಾರಣಕ್ಕೆ ತನ್ನ ತಮ್ಮನನ್ನು ಆತನ ಹೆಂಡತಿ ಹಾಗೂ ತವರುಮನೆಯವರು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ನಾಪತ್ತೆಯಾದ ವ್ಯಕ್ತಿಯ ಅಕ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್ ಯಲ್ಲಾಪುರ

Exit mobile version