ನ್ಯಾಯಾಧೀಶರಿದ್ದ ಕಾರು ಡಿಕ್ಕಿ| ರಾ.ಹೆ,63ರಲ್ಲಿ ಸರಣಿ ಅಪಘಾತ | ಹಿಂಬದಿಯಿಂದ ಡಿಕ್ಕಿ ಹೊಡಿಸಿಕೊಂಡ ರಭಸಕ್ಕೆ ಮುಂಬದಿ ಪೊಲೀಸ್ ವಾಹನಕ್ಕೆ ಗುದ್ದಿದ ಕಾರು

ಅಂಕೋಲಾ ಜುಲೈ 12:ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ ಹುಬ್ಬಳ್ಳಿ ಮಾರ್ಗಮಧ್ಯೆ ಬಿದ್ರಳ್ಳಿ ಹತ್ತಿರದ ಕಳಸನ ಮಕ್ಕಿ ಬಳಿ ಜುಲೈ 11ರಂದು ಸಂಜೆ 5,30ರ ಸುಮಾರಿಗೆ ಸರಣಿ ರಸ್ತೆ ಅಪಘಾತ ಒಂದು ಸಂಭವಿಸಿದೆ. ಕುಮಟಾ ಕಡೆಯಿಂದ ಧಾರವಾಡಕ್ಕೆತೆರಳುತ್ತಿದ್ದರೆನ್ನಲಾದ ಹೈಕೋರ್ಟ್ ನ್ಯಾಯಾಧೀಶರೋರ್ವರ ಕಾರಿಗೆ, ಹಿಂಬದಿಯಿಂದ ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ನ್ಯಾಯಾಧೀಶರ ಕಾರು, ಮುಂಭಾಗದಲ್ಲಿ ಚಲಿಸುತ್ತಿದ್ದ ಬೆಂಗಾವಲು ವಾಹನಕ್ಕೆ (ಪೊಲೀಸ್ ಎಸ್ಕಾರ್ಟ್ ) ಗುದ್ದಿದ ಪರಿಣಾಮ ನ್ಯಾಯಾಧೀಶರ ಕಾರಿನ ಹಿಂಭಾಗ ಮತ್ತು ಮುಂಭಾಗ ಸ್ವಲ್ಪ ಜಖಂಗೊಂಡಿದೆ. ಅದೃಷ್ಟವಶಾತ್ ನ್ಯಾಯಾಧೀಶರು ಸಹಿತ ಅಪಘಾತಕ್ಕೊಳಗಾದ ಒಟ್ಟೂ ಮೂರು ವಾಹನಗಳ ಯಾರೊಬ್ಬರಿಗೂ ಗಾಯ ಮತ್ತು ನೋವುಗಳು ಆಗಿಲ್ಲ ಎನ್ನಲಾಗಿದೆ.

ನ್ಯಾಯಾಧೀಶರ ಕಾರಿಗೆ ಅಪಘಾತ ಪಡಿಸಿದ ವಾಹನ ಉಡುಪಿ ಮೂಲದ ಯೋಗೇಂದ್ರ ವಾಸುದೇವ್ ಎನ್ನುವವರದ್ದಾಗಿದ್ದು, ಅವರ ವಾಹನ ಇದೇ ಮಾರ್ಗವಾಗಿ,ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ಈ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು,ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version