ಮಾಂಸದಾಸೆಗೆ ಮೇಯಲು ಬಿಟ್ಟ ಆಕಳನ್ನು ಸಾಯಿಸಿದರು| ಆಕಳು ಮಾಲೀಕನನ್ನು ನೋಡಿ ಪರಾರಿಯಾದ ಕಿಡಿಗೇಡಿಗಳು

ಮನೆಗೆ ಬಾರದ ಆಕಳನ್ನು ಹುಡುಕಿಕೊಂಡು ಹೋದ ವೇಳೆ ಕಂಡಿತು ಭೀಕರ ದೃಶ್ಯ

ಭಟ್ಕಳ: ಯಾರೋ ಕಿಡಿಗೇಡಿಗಳು ಮಾಂಸದಾಸೆಗೆ ಮೇಯಲು ಬಿಟ್ಟ ಆಕಳನ್ನು ಸಾಯಿಸಿ ಮಾಂಸ ತಯಾರಿಸುತ್ತಿದ್ದ ವೇಳೆ ಆಕಳು ಮಾಲೀಕನನ್ನು ಕಂಡು ಓಡಿಹೋದ ಘಟನೆ ತಾಲೂಕಿನ ಸಾಗರ ರಸ್ತೆಯ ಕೋಟಗೊಂಡ ಗುಡ್ಡೆ ಕಟ್ಟೆ ಸಮೀಪ ನಡೆದಿದೆ. 

ತಾಲೂಕಿನ ಕೋಟಖಂಡ ನಿವಾಸಿಯಾದ ಆಕಳು ಮಾಲೀಕ ಬಡಿಯಾ ಸುಣ್ಣ ಗೊಂಡ ಬೆಳಿಗ್ಗೆ ಮೇಯಲು ಬಿಟ್ಟ ಆಕಳು ಸಂಜೆಯಾದರು ಮನೆಗೆ ಬರದ ಹಿನ್ನೆಲೆ ಸಾಗರ ರಸ್ತೆಯ ಗುಡ್ಡೆ ಕಟ್ಟೆ ಸಮೀಪ ಹುಡುಕಿಕೊಂಡು ಹೋದ ವೇಳೆ ಆಘಾತ ಕಾದಿತ್ತು. ಆಕಳನ್ನು ಸಾಯಿಸಲಾಗಿದ್ದು, ಈ ವೇಳೆ ಬಂದ ಮಾಲೀಕನನ್ನು ನೋಡಿ, ಕಿಡಿಗೇಡಿಗಳು ಓಡಿಹೋಗಿದ್ದಾರೆ.

ಬಕ್ರೀದ್ ಹಬ್ಬದ ಹಿನ್ನೆಲೆ  ತಾಲೂಕಿನಾದ್ಯಂತ  ಪೊಲೀಸರು ಚೆಕ್ ಪೋಸ್ಟ್ ಬಿಗಿಗೊಳಿಸಿರುವುದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮೇಯಲು ಬಿಟ್ಟ ಆಕಳನ್ನು ಕಳುವು ಮಾಡಿ ಗೋಮಾಂಸ ಮಾಡಿಕೊಂಡು ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆ ಇರಬಹುದೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. 

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭಟ್ಕಳ ಸಿ.ಪಿ.ಐ,  ದಿವಾಕರ್  ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ ಭರತ್ ,ನಗರ ಠಾಣೆಯ ಪಿಎಎಸ್‍ಐ ಸುಮಾ ಬಿ, ಹಾಗೂ ಹನುಮಂತಪ್ಪ ಕುಡಗುಂಟಿ ಹಾಗೂ ಸಿಬ್ಬಂದಿಗಳು ಮತ್ತು ಪಶು ಇಲಾಖೆ ಇಲಾಖೆಯ ಅಧಿಕಾರಿಗಳಯಾದ ವಿವೇಕಾನಂದ ಹೆಗ್ಡೆ ,ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ನಡೆಸಿ ಪೋಲಿಸ್ ಮುಂದಾಳತ್ವದಲ್ಲಿ ವಿಧಿವಿಧಾನ ಮೂಲಕ ಆಕಳುವಿನ ಅಂತ್ಯ ಸಂಸ್ಕಾರ ನೆರವೇರಿಸಿದರು. ಇಂಥ ಕಿಡಿಕೇಡಿ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಲಾಗುವುದುವೆಂದು ಪೊಲೀಸರು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Exit mobile version