ಅಲೆಯ ರಭಸಕ್ಕೆ ಮುಗುಚಿದ ದೋಣಿ: ಮಗುಚಿದ ದೋಣಿಯ ಮೇಲೆ ಕೂತು ಸಹಾಯ ಯಾಚಿಸಿದರು

ಮುರ್ಡೇಶ್ವರದ ಅರಬಿ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುವ ವೇಳೆ ಗಿಲ್ನಟ್ ದೋಣಿ ಸಮುದ್ರ ಅಲೆಯ ರಭಸಕ್ಕೆ ಮಗುಚಿದ ಕಾರಣ 7 ಮಂದಿ ಮೀನುಗಾರರು ಅಪಾಯದಲ್ಲಿದ್ದರು. ಜನಾರ್ದನ ಹರಿಕಾಂತ ಇವರಿಗೆ ಸೇರಿದ ಜಲ ಗಂಗಾ ದೋಣಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆ ಅಲೆಯ ರಭಸಕ್ಕೆ ಮಗುಚಿದೆ.

ಹೀಗಾಗಿ ದೋಣಿಯಲ್ಲಿದ್ದ 7 ಮೀನುಗಾರರು ಸಮುದ್ರಕ್ಕೆ ಹಾರಿಕೊಂಡು ನಂತರ ಮೀನುಗಾರರು ಮಗುಚಿದ ದೋಣಿಯ ಮೇಲೆ ಕೂತು ಸಹಾಯ ಯಾಚಿಸುತ್ತಿರುವುದನ್ನು ಗಮನಿಸಿದ ದಡದಲ್ಲಿದ್ದ ಮೀನುಗಾರರು ತಕ್ಷಣ ಇನೊಂದು ಬೋಟ್ ಮೂಲಕ 7 ಮಂದಿಯನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ. ದೋಣಿ ಮಗುಚಿದ ಕಾರಣ ದೋಣಿಯ ಎಂಜಿನ್ ಹಾಗೂ ಮೀನುಗಾರಿಕೆ ಬಳಸುವ ಬಲೆ ಸೇರಿ ಸುಮಾರು ಒಂದುವರೆ ಲಕ್ಷ ರೂ ಹಾನಿಯಾಗಿರುವ ಬಗ್ಗೆ ಮುರುಡೇಶ್ವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version