ಈ ಹೊಟೇಲ್ ನಲ್ಲಿ ಫುಲ್ ಮಿಲ್ಸ್ ಫ್ರೀ! ಆದರೆ ಒಂದು ಕಂಡೀಷನ್: ಆಗಸ್ಟ್ 15ರ ವರೆಗೆ ಮಾತ್ರ ಈ ಆಫರ್!
![](http://i0.wp.com/vismaya24x7.com/wp-content/uploads/2021/08/hotel_45001.jpg?fit=1200%2C675&ssl=1)
ಭಟ್ಕಳ: ಇದೀಗ ಎಲ್ಲಿ ನೋಡಿದ್ರು ನೀರಜ್ ಚೋಪ್ರಾ ಹೆಸರು ಎಲ್ಲಾ ಕಡೆಗಳಲ್ಲೂ ಟ್ರೆಂಡಿoಗ್ ನಲ್ಲಿದೆ. ಓಲಂಪಿಕ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್ ಚೋಪ್ರಾಗೆ ಸದ್ಯ ಎಲ್ಲಾ ಕಡೆಯಿಂದಲೂ ಶುಭ ಹಾರೈಕೆಗಳು ಬರುತ್ತಿವೆ.
![](http://i0.wp.com/vismaya24x7.com/wp-content/uploads/2021/07/vismaya-3.png?resize=708%2C226&ssl=1)
ಈ ನಡುವೆ ಭಟ್ಕಳದ ಶಿರಾಲಿಯ ಹೊಟೇಲ್ ಒಂದು ನೀರಜ್ ಎಂಬ ಹೆಸರಿನವರಿಗೆ ಉಚಿತವಾಗಿ ಊಟ ನೀಡುವುದಾಗಿ ಘೋಷಿಸಿದೆ. ಇಲ್ಲಿನ ‘ತಾಮ್ರ’ ರೆಸ್ಟೋರೆಂಟ್ ಇಲ್ಲಿ ಈ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ. ಆ ಮೂಲಕ ಚಿನ್ನದ ವೀರ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
![](http://i0.wp.com/vismaya24x7.com/wp-content/uploads/2021/08/sea-food.jpg?resize=708%2C398&ssl=1)
ನೀರಜ್ ಎಂಬ ಹೆಸರಿನವರಿಗೆ ಅನ್ ಲಿಮಿಟೆಡ್ ಊಟವನ್ನು ಇಲ್ಲಿ ನೀಡಲಾಗುತ್ತಿದೆ. ಈ ಕೊಡುಗೆ ಆಗಸ್ಟ್ 15ರವರೆಗೂ ಇದ್ದು, ಈ ಬಗ್ಗೆ ಈಗಾಗಲೇ ತಮ್ಮ ಇನ್ಟ್ಟಾಗ್ರಾಂ ಖಾತೆಯಲ್ಲೂ ‘ತಾಮ್ರ’ ರೆಸ್ಟೋರೆಂಟ್ ಘೋಷಣೆ ಮಾಡಿಕೊಂಡಿದೆ. ಈ ಇನ್ಸ್ಟಾಗ್ರಾಂ ಪೋಸ್ಟ್ ಇದೀಗ ಜಿಲ್ಲೆಯಾದ್ಯಂತ ಸಾಕಷ್ಟು ವೈರಲ್ ಆಗಿದ್ದು, ಈ ಆಫರ್ ಭಾರೀ ಸದ್ದು ಮಾಡುತ್ತಿದೆ. ಇನ್ನು ಈ ಬಗ್ಗೆ ಮಾತನಾಡಿರುವ ‘ತಾಮ್ರ’ ರೆಸ್ಟೋರೆಂಟ್ ಮಾಲೀಕ ಆಶೀಶ್ ನಾಯಕ್, ನೀರಜ್ ಹೆಸರಿನವರು ಯಾರೇ ಬಂದರೂ ಅವರಿಗೆ ನಮ್ಮ ರೆಸ್ಟೋರೆಂಟ್ ನಲ್ಲಿ ಉಚಿತವಾಗಿ, ಅನ್ ಲಿಮಿಟೆಡ್, ಅವರಿಗೆ ಬೇಕಾದ ಅಥವಾ ನಮ್ಮಲ್ಲಿ ಲಭ್ಯವಿರುವ ಊಟ ನೀಡಲಾಗುತ್ತದೆ.
![](http://i0.wp.com/vismaya24x7.com/wp-content/uploads/2021/08/hotel-2.jpg?resize=708%2C398&ssl=1)
ತಮ್ಮ ಹೆಸರಿನ ಐಡಿಯನ್ನು ಅಥವಾ ಇನ್ಸ್ಟಾಗ್ರಾಂ, ಫೇಸ್ ಬುಕ್ ಖಾತೆಗಳನ್ನು ತೋರಿಸಿ ತಮ್ಮ ಹೆಸರು ನೀರಜ್ ಎಂದು ದೃಢಪಡಿಸಿದರೆ ಸಾಕು, ಅವರು ಈ ಕೊಡುಗೆ ಪಡೆದುಕೊಳ್ಳಲಿದ್ದಾರೆ. ಆದರೆ ಇದು ಕೇವಲ ನೀರಜ್ ಎಂದು ಹೆಸರಿರುವವರಿಗೆ ಮಾತ್ರ ಎಂದು ತಿಳಿಸಿದ್ದಾರೆ. ಇಲ್ಲಿಯ ತನಕ ತಾಲೂಕಿನ ನಾಲ್ಕು ಮಂದಿ ರೆಸ್ಟೋರೆಂಟಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿದ್ದು, ನೀರಜ್ ಆಚಾರಿ ಎನ್ನುವವರು ತಾಮ್ರ ರೆಸ್ಟೋರೆಂಟ್ ನಲ್ಲಿ ಫ್ರೀ ಫುಲ್ ಮಿಲ್ಸ್ ಸವಿದಿದ್ದಾರೆ.
ಇತ್ತೀಚಿನವರೆಗೂ, ತಾಮ್ರ’ ರೆಸ್ಟೋರೆಂಟ್ ನಲ್ಲಿ ಊಟ ಮಾಡಿದವರು ಇನಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ಪೇಜ್ ಅನ್ನು ಟ್ಯಾಗ್ ಮಾಡಿದರೆ ಶೇ 10ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿತ್ತು.
ವಿಸ್ಮಯ ನ್ಯೂಸ್ ಉದಯ ಎಸ್ ನಾಯ್ಕ, ಭಟ್ಕಳ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888
![](http://i0.wp.com/vismaya24x7.com/wp-content/uploads/2021/05/varaha-jyo-new.jpg?resize=708%2C704&ssl=1)