ರೇಷನ್ ಕಾರ್ಡ್,‌ಜನನ & ಮರಣ‌‌‌ ಪ್ರಮಾಣಪತ್ರ ನಕಲಿ ಮಾಡಿ ಜನರಿಗೆ ವಂಚನೆ: ಓರ್ವ ಆರೋಪಿ ಅಂದರ್

ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಳೆದ ಹಲವು ದಿನಗಳಿಂದ ನಕಲಿ ರೇಷನ್ ಕಾರ್ಡ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಜನನ ಮತ್ತು ಮರಣ ಪ್ರಮಾಣಪತ್ರವನ್ನು ವ್ಯಕ್ತಿಯೊಬ್ಬ ನಕಲಿ ಮಾಡಿ, ಜನರನ್ನು ವಂಚಿಸುತ್ತಿದ್ದ. ಇದೀಗ ಆರೋಪಿಯ ಅಂಗಡಿಯ ಮೇಲೆ ಶಿರಸಿ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ‌ ಆರೋಪಿ ಶಿರಸಿ ನಗರದ ಮುಸ್ಲಿಂಗಲ್ಲಿಯ ನಿವಾಸಿ ಸಯ್ಯದ್ ಮುಜಾಮಿಲ್ ಮನ್ಸೂರ್ . ಈತ ಕಳೆದ ಹಲವು ದಿನಗಳಿಂದ ನೂರಾರು ಜನರಿಗೆ ನಕಲಿ ರೇಷನ್ ಕಾರ್ಡ್ ಹಾಗೂ ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಮಾಡಿ, ವಂಚಿಸಿದ್ದ.

ಈ ಸಂಬಂಧ ಶಿರಸಿ ನಗರಸಭೆಯ ಪೌರಾಯುಕ್ತರು ಶಿರಸಿ ನಗರಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪರಿಕರ ಸಮೇತ ಬಂಧಿಸಿದ್ದಾರೆ.

ವಿಸ್ಮಯ ನ್ಯೂಸ್ ಶಿರಸಿ

Exit mobile version