ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಭಟ್ಕಳ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರಿಗೆ ಶ್ರದ್ದಾಂಜಲಿ

ಭಟ್ಕಳ: ಕಳೆದ ಕೆಲ ದಿನಗಳಿಂದಷ್ಟೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ತಾಲೂಕಿನ ಜಾಲಿ ನಿವಾಸಿ ಮಂಜುನಾಥ ನಾಯ್ಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಟ್ಕಳ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರು ಹಾಗು ಸಿಬ್ಬಂದಿಗಳು ಶನಿವಾರದಂದು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಮೃತರು ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಲಿ ನಿರ್ದೇಶಕರಾಗಿದ್ದರು.

ಕಳೆದ ಕೆಲ ದಿನಗಳಿಂದಸ್ಟೇ ಚಾತುರ್ಮಾಸ ವ್ರತದಲ್ಲಿದ್ದ ಉಜಿರಿಯ ಶ್ರೀ ರಾಮ ಕ್ಷೇತ್ರ ಶ್ರೀ ಬ್ರಾಹ್ಮನಂದ ಸರಸ್ವತಿ ಸ್ವಾಮೀಜಿವರನ್ನು ಭೇಟಿ ಮಾಡಿ ಊರಿಗೆ ಹಿಂತಿರುಗುವಾಗಬೈಂದೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಲೆಟ್ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇಂದು ಮೃತ ಮಂಜುನಾಥ ನಾಯ್ಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಟ್ಕಳ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರು ಹಾಗು ಸಿಬ್ಬಂದಿಗಳು ಶ್ರದ್ದಾಂಜಲಿ ಸಲ್ಲಿಸಿದ್ದಾರೆ . ಈ  ವೇಳ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕನ ಅಧ್ಯಕ್ಷರಾದ ಶಾಸಕ ಸುನೀಲ ನಾಯ್ಕ ಮೃತರ ಫೋಟೋಗೆ ಪುಷ್ಪನಮನ ಸಲ್ಲಿಸಿ ಶ್ರದ್ಧಾನಂಜಶ್ರದ್ದಾಂಜಲಿ ಸಲ್ಲಿಸಿದರು

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version