ಪರಿಚಯಸ್ಥರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ 23 ವರ್ಷದ ಯುವತಿ ನಾಪತ್ತೆ

ಯಲ್ಲಾಪುರ : ಬೆಳಿಗ್ಗೆ ಮನೆಯಿಂದ ಹೋದ 23 ವರ್ಷದ ಯುವತಿ ನಾಪತ್ತೆಯಾದ ಘಟನೆ ತಾಲೂಕಿನ ಬಾರೆಯಲ್ಲಿ ನಡೆದಿದೆ. ನಾಪತ್ತೆಯಾದ ಯುವತಿ ನಾಗರತ್ನಾ ಗೌಡ ಎಂದು ತಿಳಿದುಬಂದಿದೆ.

ಶಿರಸಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದ ಯುವತಿ ಮನೆಗೆ ವಾಪಸ್ ಬಂದಿಲ್ಲವಾಗಿದ್ದು, ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ಯುವತಿ ಎಸ್.ಎಸ್.ಎಲ್. ಸಿ ಓದಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಇದ್ದಳು. ಆದರೆ ಲಾಕ್ ಡೌನ್ ಬಳಿಕ ಮನೆಗೆ ಮರಳಿದ್ದಳು ಎನ್ನಲಾಗಿದೆ. ಇದೀಗ ಶಿರಸಿಗೆ ಪರಿಚಯದವರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು, ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.

ಇತ್ತ ಮನೆಗೆ ಮರಳಿಲ್ಲ. ಅತ್ತ ಪರಿಚಯಸ್ಥರ ಮನೆಗೂ ಹೋಗಿಲ್ಲ. ಹೀಗಾಗಿ ಪೋಷಕರು ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್ ಯಲ್ಲಾಪುರ

Exit mobile version