ಚಳಿ ಹಿನ್ನಲೆಯಲ್ಲಿ ಒಲೆಯ ಮುಂದೆ ಕುಳಿತು ಬೆಂಕಿ ಕಾಯಿಸುತ್ತಿದ್ದ ವೇಳೆ ಮೈಗೆ ಹತ್ತಿಕೊಂಡ ಬೆಂಕಿ: ಮೈಗೆ ಬೆಂಕಿ ತಗುಲಿ ಗಂಭೀರ ಗಾಯ

ಶಿರಸಿ : ಚಳಿ ತಡೆಯಲಾಗದೆ ಒಲೆಯ ಮುಂದೆ ಕುಳಿತು ಬೆಂಕಿ ಕಾಯಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬನ ಮೈಗೆ ಬೆಂಕಿ ಹೊತ್ತುಕೊಂಡು ಅನಾಹುತ ಸಂಭವಿಸಿದೆ. ಬೆಂಕಿಯಿಂದ ಮೈ ಸುಟ್ಟು ಹೋಗಿದೆ. ತಕ್ಷಣ ಮನೆಯವರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಚಳಿ ಹೆಚ್ಚಿದ್ದರಿಂದ ಶಾಖದ ಮೊರೆ ಹೋದ ವ್ಯಕ್ತಿ ಒಲೆಯಲ್ಲಿ ಬೆಂಕಿ ಕಾವು ಪಡೆಯಲು ಮುಂದಾಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಒಲೆ ಮೇಲೆ ಬಿದ್ದು ಗಾಯಗೊಂಡ ಘಟನೆ ತಾಲೂಕಿನ ಹಿರೇಕಳವೆಯಲ್ಲಿ ನಡೆದಿದೆ.

ಗಣಪತಿ ಗೌಡ ಬೆಂಕಿಯಲ್ಲಿ ಬಿದ್ದು ಗಾಯಗೊಂಡ ವ್ಯಕ್ತಿ. ಈತ ಆಗಾಗ ತಲೆ ತಿರುಗಿ ಬೀಳುತ್ತಿದ್ದನೆಂದು ಹೇಳಲಾಗಿದೆ.‌ ಒಲೆ ಮುಂದೆ ಕುಳಿತು ಚಳಿ ಕಾಯಿಸುತ್ತಿದ್ದ ವೇಳೆಯೇ ತಲೆ ತಿರುಗಿ ಬಿದ್ದು ಅನಾಹುತ ಸಂಭವಿಸಿದೆ.

ವಿಸ್ಮಯ ನ್ಯೂಸ್ ಶಿರಸಿ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Exit mobile version