ರೈಲಿನಲ್ಲಿ ಸಾಗಿಸುತ್ತಿದ್ದ ಲಾರಿಗೆ ಹೈ ಪವರ್ ವಿದ್ಯುತ್ ಕಿಡಿ ಹಾರಿ ಬೆಂಕಿ ಅವಗಢ | ಅಗ್ನಿ ಶಾಮಕ ದಳದಿಂದ‌ ಕಾರ್ಯಾಚರಣೆ

ಭಟ್ಕಳ: ಗುಜರಾತನಿಂದ ಕೊಚ್ಚಿಗೆ ಶ್ಯಾಂಪು ತುಂಬಿದ ಲಾರಿಗೆ ರೈಲ್ವೆ ಇಲಾಖೆಯ ಹೈ ಪವರ್ ವಿದ್ಯುತ್ ವೈರನ ಕಿಡಿ ಹಾರಿ, ಅವಾಂತರವಾಗಿದೆ. ಸುರತ್ಕಲ್ 50 ಲಾರಿಗಳನ್ನು ತೆಗೆದುಕೊಂಡು ಹೊಗುತ್ತಿದ್ದ ರೈಲಿನಲ್ಲಿ ಗುಜರಾತ್ ನಿಂದ ಕೊಚ್ಚಿಗೆ ತೆರಳುತ್ತಿರುವ ಶಾಂಪು ತುಂಬಿದ ಲಾರಿಗೆ ರೈಲ್ವೆ ಇಲಾಖೆಯ ಹೈ ಪವರ್ ವಿದ್ಯುತ್ ವೈರ್ ನಿಂದ ಕಿಡಿ ಹಾರಿ, ಬೆಂಕಿ ಕಾಣಿಸಿಕೊಂಡಿದೆ.

ಈ ಬಗ್ಗೆ ಶಿರೂರು ರೇಲ್ವೆ ಸ್ಟೇಷನ್ ಮಾಸ್ಟರ್ ಸಂದೀಪ್ ಕುಮಾರ ಅವರು ನೀಡಿದ ಮಾಹಿತಿಯ್ವನಯ ಭಟ್ಕಳದ ಅಗ್ನಿ ಶಾಮಕ ದಳ‌ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಂಕಿ‌ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ‌ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಆಗುವ ಅನಾಹುತವನ್ನು ತಪ್ಪಿಸಲಾಗಿದೆ.

ಭಟ್ಕಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಎಸ್ ರಮೇಶ್ ಶೆಟ್ಟಿ, ಪ್ರಮುಖ ಅಗ್ನಿಶಾಮಕ ಮಹಮ್ಮದ್ ಶಫಿ, ಎಸ್. ಮೊಗಲ್, ಅಗ್ನಿ ಶಾಮಕ ಚಾಲಕ ಶಿವಪ್ರಸಾದ ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Exit mobile version