Important
Trending

ಎರಡು ಚಿನ್ನದ ಅಂಗಡಿ, ಪಾತ್ರೆ ಅಂಗಡಿ ಕಳ್ಳತನಕ್ಕೆ ಯತ್ನ: ಬಾಗಿಲು ಎಳೆದಾಗ ಅಲಾರಾಂ ಸಿಸ್ಟಮ್ ಅಲರ್ಟ್ ಆದಾಗ ಕಳ್ಳರು ಪರಾರಿ!

ಶಿರಸಿ: ಮೊನ್ನೆ ಮೊನ್ನೆಯಷ್ಟೆ ಹಾಡುಹಗಲೇ ಅಂಗಡಿ ಮಾಲೀಕನಿಂದ ಚಿನ್ನದ ಸರ ಕಸಿದುಕೊಂಡು ಪರಾರಿಯಾದ ಘಟನೆ ಮಾಸುವ ಮುನ್ನವೇ, ಇದೀಗ ಮತ್ತೆ ಕಳ್ಳತನಕ್ಕೆ ಯತ್ನ ನಡೆದಿರುವುದು ತಾಲೂಕಿನ ಚಿನ್ನದ ಅಂಗಡಿಯವರ ನಿದ್ದೆ ಗೆಡಿಸಿದೆ. ಹೌದು, ರಾತ್ರಿ ಎರಡು ಚಿನ್ನದ ಅಂಗಡಿ ಮತ್ತು ಒಂದು ಪಾತ್ರೆ ಅಂಗಡಿ ಕಳ್ಳತನದ ಯತ್ನ ವರದಿಯಾಗಿದೆ.

ಮಾರ್ಕೇಟ್ ರೋಡ್‌ಲ್ಲಿರುವ ಅಭಿಷೇಕ್ ಜ್ಯುವೇಲರಿ, ಸಂಗಮ ಜ್ಯುವೆಲರಿ ಹಾಗೂ ಪಾತ್ರೆ ಪರಿಕರದ ಅಂಗಡಿಯಲ್ಲಿ ಕಳ್ಳತನಕ್ಕೆ ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ. ಅಂಗಡಿಯ ಮೇಲ್ಘಾವಣಿ ಒಡೆದು ಅಂಗಡಿಯಲ್ಲಿ ಕಳ್ಳತನಕ್ಕೆ ಪ್ರಯತ್ನ ಮಾಡಿದ್ದಾರೆ ಕಳ್ಳರು.

ಆದರೆ, ಬಾಗಿಲನ್ನು ಎಳೆದಾಗ ಅಲಾರಾಂ ಸಿಸ್ಟಮ್ ಅಲರ್ಟ್ ಆಗಿದ್ದು, ಗಂಟೆ ಬಾರಿಸಿದಾಗ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಆಭರಣಗಳ ಕಳ್ಳತನವಾಗಿಲ್ಲವೆಂಬುದು ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಶಿರಸಿ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button