ಹಾಡುಹಗಲೇ ಅಂಗಡಿ ಮಾಲೀಕನಿಂದ ಚಿನ್ನದ ಸರ ಕಸಿದುಕೊಂಡು ಪಾರಿಯಾಗಿದ್ದವರು ಅಂದರ್: ಇಬ್ಬರ ಬಂಧನ

ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಲು ಕಳ್ಳರು ಖತರ್ನಾಕ್ ಪ್ಲಾನ್ ಮಾಡಿದ್ದರು. ಅಂಗಡಿಯಿoದ ದೂರದಲ್ಲಿ ಕಾರು ನಿಲ್ಲಿಸಿ, ಕಳ್ಳತನಕ್ಕೆ ಯೋಜನೆ ರೂಪಿಸಿದ್ದರು. ಅದರಂತೆ ಒಬ್ಬ ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದಿದ್ದ. ಮಾಲೀಕನಿಂದ ಚಿನ್ನದ ಸರ ಕಸಿದುಕೊಂಡು ಸ್ಥಳದಿಂದ ಪಾರಾಗಿ, ದೂರದಲ್ಲಿ ನಿಲ್ಲಿಸಿಟ್ಟ ಕಾರಿನಲ್ಲಿ ಎಸ್ಕೇಪ್ ಆಗಿದ್ದ.

ಶಿರಸಿ: ಚಿನ್ನದ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಹಾಡುಗಲೇ ಮಾಲೀಕನಿಂದ ಚಿನ್ನವನ್ನು ಕದ್ದು, ಪರಾರಿಯಾಗಿದ್ದ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ತನಿಖೆಗಿಳಿದ ಪೋಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಕಂಡಿದ್ದಾರೆ.

ಹೌದು, ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು ಅಂಗಡಿಯವನಿoದ ಚಿನ್ನದ ಸರವನ್ನ ಕಸಿದುಕೊಂಡು ಪರಾರಿಯಾಗಿದ್ದ. ನಗರದ ಸಿಪಿ ಬಜಾರ್ ರಸ್ತೆಯಲ್ಲಿರುವ ರತ್ನದೀಪ್ ಜ್ಯುವೆಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಕಳ್ಳನೊಬ್ಬ ಆಗಮಿಸಿದ್ದ. ಮೊದಲು ಅಂಗಡಿಗೆ ಬಂದು ಕಳ್ಳ ಚಿನ್ನದ ಸರ ಖರೀದಿ ಮಾಡುವಂತೆ ನಟಿಸಿದ್ದಾನೆ. ಬಳಿಕ ಏಕಾಏಕಿ ಸರವನ್ನು ಮಾಲೀಕನ ಕೈಯಿಂದ ಕಸಿದು ಕದ್ದು ಪರಾರಿಯಾಗಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ನಿಲೇಶ ವಾಸುದೇವ ರೇವಣಕರ (32),ರಾಘವೇಂದ್ರ ಬಾಲಕೃಷ್ಣ ದೈವಜ್ಞ (35) ಬಂದಿತ ಆರೋಪಿಗಳು. ಬಂಧಿತರಿoದ ಅಂದಾಜು 53,130 ರೂಪಾಯಿ ಮೌಲ್ಯದ 11.50 ಗ್ರಾಮ್ ಚಿನ್ನದ ಸರ,49,000 ಸಾವಿರ ಮೌಲ್ಯದ 22.28 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಳ್ಳತನಕ್ಕೆ ಬಳಸಿದ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ ಪೊಲೀಸರು.

ವಿಸ್ಮಯ ನ್ಯೂಸ್, ಶಿರಸಿ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Exit mobile version