ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಸಮಿತಿ ಅಧ್ಯಕ್ಷ ಕಾರ್ಯದರ್ಶಿಗಳ ಆಯ್ಕೆ

ಅಂಕೋಲಾ ಅ.10: ಅಂಕೋಲಾ ತಾಲೂಕಾ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸಮಾಜದ ಹಿರಿಯರಾದ ಜಟ್ಟಿ ಬಿ ನಾಯ್ಕ ತೆಂಕಣಕೇರಿ ಹಾಗೂ ಕಾರ್ಯದರ್ಶಿಯಾಗಿ ಯುವ ಉದ್ದಿಮೆದಾರ ಮಂಜುನಾಥ ವಿ ನಾಯ್ಕ ಆಯ್ಕೆಯಾಗಿದ್ದಾರೆ.

ಪಟ್ಟಣ ವ್ಯಾಪ್ತಿಯ ಕಾಕರಮಠ ನಾಮಧಾರಿ ಸಮಾಜದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರು ಕಾರ್ಯದರ್ಶಿ ಮತ್ತು ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಎಮ್.ಪಿ.ನಾಯ್ಕ, ರಾಜು ಆರ್ ನಾಯ್ಕ(ಕೈಗಾ ರಾಜು) , ನಾಗೇಶ ವಿ ನಾಯ್ಕ(ಆಚಾ), ನಾಗೇಂದ್ರ ಸಿ ನಾಯ್ಕ, ಉಪೇಂದ್ರ ನಾಯ್ಕ ಹನುಮಟ್ಟಾ, ರವಿ ಪಿ ನಾಯ್ಕ, ಗಣಪತಿ ನಾಯ್ಕ, ಹೊನ್ನಪ್ಪ ನಾಯ್ಕ, ವಾಸು ನಾಯ್ಕ, ಮಂಜುನಾಥ ಡಿ ನಾಯ್ಕ ಬೇಳಾಬಂದರ, ಬಾಲಕೃಷ್ಣ ಕೆ ನಾಯ್ಕ, ಜಯಪ್ರಕಾಶ ಜಿ ನಾಯ್ಕ ( ಜೆ.ಪ್ರಿ), ಅಶೋಕ ಎಸ್ ನಾಯ್ಕ, ಕೃಷ್ಣ ನಾಯ್ಕ, ವಿಶ್ವನಾಥ ಟಿ ನಾಯ್ಕ, ಚಂದ್ರಕಾಂತ ನಾಯ್ಕ, ನಾಗೇಶ ಬಿ ನಾಯ್ಕ, ಮುರ್ಕುಂಡಿ ನಾಯ್ಕ, ಗಣೇಶ ನಾಯ್ಕ, ರಾಜೇಶ ಎಮ್ ನಾಯ್ಕ ತೆಂಕಣಕೇರಿ, ರಮೇಶ ನಾಯ್ಕ, ಪ್ರಕಾಶ ಬಿ ನಾಯ್ಕ, ಅಜೇಯ ನಾಯ್ಕ, ಸುರೇಶ ನಾಯ್ಕ, ಮಂಜು ನಾಯ್ಕ, ಶ್ರೀಧರ ನಾಯ್ಕ, ನಾಗರಾಜ ನಾಯ್ಕ, ಕೃಷ್ಣ ನಾಯ್ಕ, ರಾಜು ಜಿ ನಾಯ್ಕ, ನಾಗೇಂದ್ರ ನಾಯ್ಕ, ಶಿವಾನಂದ ನಾಯ್ಕ, ಸಂಜು ನಾಯ್ಕ, ಲೀಲಾವತಿ ನಾಯ್ಕ ಮಂಜಗುಣಿ, ನಾಗೇಶ ನಾಯ್ಕ, ಉದಯ ನಾಯ್ಕ, ಸುರೇಶ ನಾಯ್ಕ ಅಸ್ಲಗದ್ದೆ ಸೇರಿದಂತೆ ಸಮಾಜದ ಹಿರಿ-ಕಿರಿಯ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version