ಜೆಡಿಎಸ್ ತಾಲೂಕು ಪದಾಧಿಕಾರಿಗಳ ನೇಮಕಾತಿ ಪತ್ರ ಹಸ್ತಾಂತರ

ಪ್ರತೀ ತಿಂಗಳ ಕೊನೆ ಬುಧವಾರ ಸಂಜೆ 4 ಗಂಟೆಗೆ ಪಕ್ಷದ ಕಚೇರಿ ಯಲ್ಲಿ ಸಂಘಟನಾ ಸಭೆ

ಸಿದ್ದಾಪುರ: ಜೆಡಿಎಸ್ ಪಕ್ಷದ ತಾಲೂಕು ಪದಾಧಿಕಾರಿಗಳ ನೇಮಕಾತಿ ಪತ್ರ ಹಸ್ತಾಂತರ ಕಾರ್ಯಕ್ರಮ ಬಾಲಭವನದಲ್ಲಿ ನಡೆಯಿತು.

ಪದಾಧಿಕಾರಿಗಳಿಗೆ ಪತ್ರ ಹಸ್ತಾಂತರಿಸಿದ ಜಿಲ್ಲಾ ಧ್ಯಕ್ಷ ಗಣಪಯ್ಯ ಗೌಡ ಮಾತನಾಡಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಆಗಬೇಕಿದೆ, ಎಲ್ಲಾ ಸಮಾಜದವರ ವಿಶ್ವಾಸ ತೆಗೆದುಕೊಂಡು ಜಿಲ್ಲೆಯ ಲ್ಲಿ ಹೆಚ್ಚಿನ ಸ್ಥಾನ ಗಳನ್ನು ಪಡೆದು ಕುಮಾರಸ್ವಾಮಿ ಯವರನ್ನು ಮುಖ್ಯ ಮಂತ್ರಿ ಯನ್ನಾಗಿ ಮಾಡುತ್ತೇವೆ ಎಂದರು.

ಡಾ. ಶಶಿಭೂಷಣ ಹೆಗಡೆ ಮಾತನಾಡಿ ಇಂದು ಪಕ್ಷದ ಸಂಗಟನೆಗೆ ಚಾಲನೆ ನೀಡಲಾಗಿದ್ದು, ಈ ತಿಂಗಳೊಳಗಾಗಿ ಬೂತ್,ಮತ್ತು ತಾಲೂಕು ಕಮೀಟಿ ರಚನೆ ಮಾಡಬೇಕಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದ ಪಕ್ಷ ಕಟ್ಟುತ್ತೇವೆ. ನವೆಂಬರ್ 15 ರೊಳಗೆ ಮೆಂಬರಶಿಪ್ ಅಭಿಯಾನ ನಡೆಸಲಾಗುವುದು ಪ್ರತೀ ತಿಂಗಳ ಕೊನೆ ಬುಧವಾರ ಸಂಜೆ 4ಗಂಟೆಗೆ ಪಕ್ಷದ ಕಚೇರಿ ಯಲ್ಲಿ ಸಂಘಟನಾ ಸಭೆ ನಡೆಸಲಾಗುತ್ತದೆ ಎಲ್ಲ ಕಾರ್ಯಕರ್ತರು ಹಾಜರಿರಬೇಕು ಎಂದರು.

ಜೆಡಿಎಸ್ ಮುಖಂಡ ಜಿ ಕೆ ಪಟಗಾರ, ನೂತನ ತಾಲೂಕು ಅಧ್ಯಕ್ಷ ಕೆ ಎಂ ಹೆಗಡೆ ಮಾತನಾಡಿದರು. ಮುಖಂಡರಾದ ಪಿ ಟಿ ನಾಯ್ಕ, ವಿ ಎಂ ಭಂಡಾರಿ, ಸತೀಶ್ ಹೆಗಡೆ ಉಪಸ್ಥಿತರಿದ್ದರು. ಪರಮೇಶ್ವರ್ ಹಿತ್ಲಕೊಪ್ಪ ನಿರೂಪಿಸಿದರು.

ಜೆ ಡಿ ಎಸ್ ಪಕ್ಷದ ಹೆಚ್ಚಿನ ಮಾಹಿತಿಗೆ ಹಾಗೂ ಸಂಘಟನೆ ಗೆ 9448821423 ಕೆ ಎಂ ಹೆಗಡೆ ಇವರನ್ನು ಕಾರ್ಯಕರ್ತರು ಸಂಪರ್ಕಿಸಬಹುದಾಗಿದೆ.

ವಿಸ್ಮಯ ನ್ಯೂಸ್ ಸಿದ್ದಾಪುರ

Exit mobile version