ಮದಿರೆ ಮತ್ತಿನಲ್ಲಿ ತಾಯಿ ಅಕ್ಕನಿಗೆ ಗುಂಡು ಹಾರಿಸಿ ಕೊಲೆ: ಊಟದ ವಿಷಯಕ್ಕೆ ನಡೆಯಿತು ದುರ್ಘಟನೆ

ಸಿದ್ದಾಪುರ: ಮದಿರೆ ಮತ್ತಿನಲ್ಲಿ ಅನೇಕ ಅವಘಡಗಳು ಸಂಭವಿಸುತ್ತಿದೆ. ಹೌದು, ಕುಡಿದ ಅಮಲಿನಲ್ಲಿ ಕ್ಷುಲ್ಲಕ ವಿಷಯಕ್ಕೆ ತಾಯಿ ಹಾಗೂ ಅಕ್ಕನನ್ನು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕುಡಗುಂದದಲ್ಲಿ ನಡೆದಿದೆ.

ಊಟದ ವಿಷಯದಲ್ಲಿ ತಗಾದೆ ತೆಗೆದಿದ್ದ ಮಗ ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡು ತಾಯಿ ಹಾಗೂ ಅಕ್ಕನಿಗೆ ಹೊಡೆದಿದ್ದಾನೆ. ಈ ವೇಳೆ ಅಕ್ಕ ತಾಯಿ ಇಬ್ಬರೂ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಮಂಜುನಾಥ್ ಜಯಂತ್ ನಾರಾಯಣ ಹಸಲರ್, ಕೊಲೆಗೈದ ಆರೋಪಿ. ತಾಯಿ ಪಾರ್ವತಿ ಹಾಗೂ ಅಕ್ಕ ರಮ್ಯಾ ಕೊಲೆಯಾದ ದುರ್ದೈವಿಗಳು. ಈ ದುರ್ಘಟನೆ ವೇಳೆ ತಂದೆ ನಾರಾಯಣ್ ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version