ಪವರ್ ಸ್ಟಾರ್ ಪುನೀತರಾಜಕುಮಾರ್ ಅವರಿಗೆ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ ಸಲ್ಲಿಕೆ

ಕುಮಟಾ: ಪಟ್ಟಣದ ಉಪ್ಪಾರಕೇರಿಯಲ್ಲಿ ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತರಾಜಕುಮಾರ ಅವರಿಗೆ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಕುಮಟಾಕ್ಕೆ ಕೆಲವು ದಿನಗಳ ಹಿಂದೆ ಆಗಮಿಸಿದ್ದರು. ಅವರ ಅಭಿಮಾನಿಗಳು ಪಟ್ಟಣದ ಉಪ್ಪಾರಕೇರಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಿ, ಬಾರದ ಲೋಕಕ್ಕೆ ಪಯಣಿಸಿದ ನಟನೆಯ ಕುರಿತು ಅಭಿಮಾನ ಹಂಚಿಕೊAಡರು. ಚಿಕ್ಕ ಮಕ್ಕಳು ಸೇರಿದಂತೆ ಅವರ ಅಪಾರ ಅಭಿಮಾನಿಗಳು ಮೊಂಬತ್ತಿ ಬೆಳಗಿ ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Exit mobile version