ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ: ಆರ್ ವಿ ದೇಶಪಾಂಡೆ

ಜೋಯ್ಡಾ: ಉಳವಿ ಕ್ಷೇತ್ರಕ್ಕೆ ಕೂಡಾ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ. ನಮ್ಮ ಸರಕಾರ ಇರಬೇಕಾದರೆ ಸ್ಥಳದಲ್ಲೆ ಕಾಮಗಾರಿಗೆ ಮಂಜೂರಿ ಮಾಡುತ್ತಿದ್ದೆ, ಈಗಿನ ಸರಕಾರದಿಂದ ಅನುದಾನ ,ಕೆಲಸಗಳು ಸಾಕಷ್ಟು ಆಗುತ್ತಿಲ್ಲ.ಈಗಲೂ ಸಹ ಅಭಿವೃದ್ದಿ ಬಗಗೆ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕ ಅರ್.ವಿ ದೇಶಪಾಂಡೆ ಹೇಳಿದರು. ಅವರು ಉಳವಿಯಲ್ಲಿ 10 ಲಕ್ಷ ಅನುಧಾನದಲ್ಲಿ ಮಂಜೂರಿಯಾದ ಅಂಗನವಾಡಿ ಕಟ್ಟಡ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಉಳವಿ ದೇವಸ್ಥಾನ ಪ್ರದಾನ ಅರ್ಚಕ ಕಲ್ಮಠ ಶಾಸ್ತ್ರಿ ಮಾತನಾಡಿ ದೇಶಪಾಂಡೆಯವರು ಮಾಡಿರುವ ಕೆಲಸವನ್ನು ಸ್ಮರಣೆ ಮಾಡಿಕೊಂಡರೆ ಸಾಕು. ಅವರ ಸಹಕಾರದಿಂದ ಕೊಟ್ಯಾಂತರ ಅನುಧಾನದಲ್ಲಿ ಇಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿದೆ . ಟ್ರಸ್ಟ್ ಕಮೀಟಿಯಿಂದ ಧನ್ಯವಾದ ತಿಳಿಸುತ್ತೇವೆ ಎಂದರು. ಉಳವಿ ಮತ್ತು ಶಿವಪುರ ಸಾರ್ವಜನಿಕರಿಂದ ಶಾಸಕ ಅರ್.ವಿ ದೇಶಪಾಂಡೆಯವರನ್ನ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದ್ಯಸರಾದ ರಮೇಶ ನಾಯ್ಕ,ಸಂಜಯ ಹಣಬರ,ಉಳವಿ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಮುಖಾಶಿ, ಉಳವಿ ಟ್ರಸ್ಟ್ ಕಮೀಟಿಯ ಅಧ್ಯಕ್ಷ ಗಂಗಾಧರ ಕಿತ್ತೂರ,ಉಪಾಧ್ಯಕ್ಷ ಸಂಜಯ ಕಿತ್ತೂರ, ಕಲ್ಮಠ ಶಾಸ್ತ್ರಿ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬಗಾರ,ತಾ.ಪಂ ಇಓ ಅನಂದ ಬಡಕುಂದ್ರಿ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಜೋಯ್ಡಾ

Exit mobile version