Follow Us On

WhatsApp Group
Important
Trending

ಅಕ್ರಮ ಬಂದೂಕು ಜಪ್ತಿ. ಆರೋಪಿ ಬಂಧನ

ಅಂಕೋಲಾ: ಯಾವುದೇ ರೀತಿಯ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ, ಆತನಿಂದ ಬಂದೂಕು ಜಪ್ತಿಪಡಿಸಿಕೊಂಡ ಘಟನೆ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ನಡೆದಿದೆ.

ಅಚವೆ ಗ್ರಾಮದ ಅಂಗಡಿಬೈಲ್ (ವಾಡಗಾರ ) ನಿವಾಸಿ ಗೋಪಾಲ ಕುರಂಗ್ಯಾ ಮರಾಠಿ (46) ಬಂಧಿತ ಆರೋಪಿಯಾಗಿದ್ದು ಈತ ಅಚವೆ ಗ್ರಾಮದ ಕೊಡೆಮನೆ ಕ್ರಾಸ್ ಬಸ್ ತಂಗುದಾಣದ ಹತ್ತಿರ ಲೈಸೆನ್ಸ್ ಇಲ್ಲದ ಒಂಟಿ ನಳಿಕೆ (ಸಿಂಗಲ್ ಬ್ಯಾರಲ್ ) ಬಂದೂಕನ್ನು ತನ್ನ ತಾಬಾ ಇಟ್ಟುಕೊಂಡು ಹೋಗುತ್ತಿದ್ದಾಗ, ಪೊಲೀಸರು ದಾಳಿ ನಡೆಸಿ ಭಾರತೀಯ ಆಯುಧ ಅಧಿನಿಯಮ ಕಲಂ : 3, 25(1B), (a) ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

ಸಿಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ,ಪೊಲೀಸ್ ಉಪನಿರೀಕ್ಷಕ ಪ್ರೇಮನಗೌಡ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಸಿಬ್ಬಂದಿ ಮಂಜುನಾಥ ಲಕ್ಕಾಪುರ, ಗಣಪತಿ ನಾಯಕ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button