Big News
Trending

ಸ್ನೇಹಿತನನ್ನು ಭೇಟಿಯಾಗಲು ಹೋಗುತ್ತಿದ್ದ ವೇಳೆ ತಡೆದು ನಿವೃತ್ತ ಸೈನಿಕನ ಮೇಲೆ ಹಲ್ಲೆ : ಅಳಲುತೋಡಿಕೊಂಡ ನಿವೃತ್ತ ಸೈನಿಕ : ಒಂದುವರೆ ಗಂಟೆಗಳ ಕಾಲ ತಡೆದು ಮಾಡಿದ್ದೇನು ನೋಡಿ?

ಹೊನ್ನಾವರ: ಅಂಕೋಲಾ ಮೂಲದ ನಿವೃತ್ತ ಸೈನಿಕ ವಿನೋದ ವಿಶ್ವನಾಥ ಕಾಂಬ್ಳೆ ಭಟ್ಕಳದ ಲೈಟ್ ಹೌಸ್ ನಲ್ಲಿ ಕೆಲಸ ಮುಗಿಸಿ ರಾತ್ರಿ ಹೋಗುತ್ತಿರುವ ವೇಳೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ತಾಲೂಕಿನ ಕಾಸರಕೋಡಿನ ಟೊ0ಕದ ಪೋರ್ಟ್ನಲ್ಲಿ ಕೆಲಸ ಮಾಡುತ್ತಿರುವ ಮಾಜಿ ಸೈನಿಕ ವಿನಾಯಕ ನಾಯ್ಕರನ್ನು ಭೇಟಿ ಯಾಗಲು ಹೋದಾಗ ಕಾಸರಕೋಡು ಭಾಗದ 10 ರಿಂದ 15 ಜನರು ನನ್ನ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ.

ನನ್ನ ಬೈಕ್ ಚಾವಿ ತೆಗೆದುಕೊಂಡು, ಎಲ್ಲಿ ಹೋಗುತ್ತೀಯಾ? ಕಳುವು ಮಾಡಲು ಬಂದಿದ್ದೀಯ ಎಂದು ಹೊಡೆದು, ಬೈದು ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ. ಒಂದುವರೆ ಗಂಟೆ ತನಕ ನನ್ನ ಅಲ್ಲೇ ಇಟ್ಟುಕೊಂಡು ಹಿ0ಸೆ ನೀಡಿದ್ದಾರೆ ಎಂದು ಮಾಜಿ ಸೈನಿಕ ವಿನೋದ ಕಾಂಬ್ಳೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಕುರಿತು ನಿವೃತ್ತ ಸೈನಿಕರು ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯ ಶ್ರೀಕಾಂತ ನಾಯ್ಕ ಮಾತನಾಡಿ, ನಮ್ಮ ಮಾಜಿ ಸೈನಿಕರಾದ ವಿನೋದ ಕಾಂಬ್ಳೆಯವರು ಭಟ್ಕಳದಲ್ಲಿ ಕೆಲಸಮುಗಿಸಿ ತಮ್ಮ ಸಹಪಾಟಿ ವಿನಾಯಕ ನಾಯ್ಕರನ್ನು ಭೇಟಿ ಯಾಗಲು ಹೋದಾಗ ಕಾಸರಕೋಡು ಟೋಂಕಕ್ಕೆ ತೆರಳಿದಾಗ ಅಲ್ಲಿಯ ಕೆಲವರು ಇವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಇಲ್ಲಿ ಕಳ್ಳತನ ಮಾಡಲು ಬಂದಿದ್ದೀಯ ಎಂದು ಅನುಮಾನ ವ್ಯಕ್ತಪಡಿಸಿ ಹಲ್ಲೆಮಾಡಿ ಹಿಂಸೆ ನೀಡಿದಾರೆ. ಮಾಜಿ ಸೈನಿಕ ಎಂದು ಹೇಳಿದ ಮೇಲೆಯೂ ಹಲ್ಲೆ ಮಾಡಿದಾರೆ. ಹಲ್ಲೆಯ ಪ್ರಮಾಣವನ್ನು ಖಂಡಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಪ್ರಕರಣ ದಾಖಲಿಸಿ 24 ಘಂಟೆ ಕಳೆದರು ತಪ್ಪತಸ್ಥರನ್ನು ಬಂಧಿಸಿಲ್ಲ. ಒಂದುವೇಳೆ ಕ್ರಮ ಕೈಗೋಳ್ಳದೆ ಇದ್ದಲ್ಲಿ ಉತ್ತರಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ ಹಾಗೂ ರಾಜ್ಯಾದ್ಯಕ್ಷರ ನೇತ್ರತ್ವದಲ್ಲಿ ಮುಂದಿನ ದಿನಗಳಲ್ಲಿ ಖಂಡನೆ ವ್ಯಕ್ತ ಪಡಿಸಲಾಗುತ್ತದೆ . ಸೂಕ್ತ ಕ್ರಮವನ್ನು ಕೂಡಲೆ ಕೈಗೋಳ್ಳಬೇಕು ಎಂದು ಆಗ್ರಹಿಸಿದರು, ಈ ಸಂದರ್ಭದಲ್ಲಿ ಅನೇಕ ನಿವೃತ ಸೈನಿಕರು ಇದ್ದರು

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button