ಅಪಘಾತದಲ್ಲಿ ಮೂರು ಕಾಲುಗಳನ್ನು ಕಳೆದುಕೊಂಡ ಗೋವಿನ ರಕ್ಷಣೆ ಮಾಡಿದ ಗೋಪ್ರೇಮಿಗಳು

ಹೊನ್ನಾವರ : ತನ್ನ ಮೂರು ಕಾಲುಗಳನ್ನು ಅಪಘಾತದಲ್ಲಿ ಕಳೆದುಕೊಂಡ ಎತ್ತಿಗೆ ಗೋ ಪ್ರೇಮಿಗಳು ಪ್ರಥಮ ಚಿಕಿತ್ಸೆ ನೀಡಿ, ಗೋಶಾಲೆಗೆ ತಲುಪಿಸಿ, ಮಾನವೀಯತೆ ಮೆರೆದ ಘಟನೆ ಜಲವಳ್ಳಿ ಗ್ರಾಮದ ಕವಲಗೆರಿಯಲ್ಲಿ ನಡೆದಿದೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಇವರ ಸಹಾಯ ಪಡೆದು ಮೂಡ್ಕಣಿ ಪಶು ಆಸ್ಪತ್ರೆಯ ವೈದ್ಯರಾದ ಪ್ರಕಾಶ್ ಹೆಗಡೆ ಹಾಗೂ ಇವರ ಸಹಾಯಕರಾದ ರೇಮಂದಿ ಹಾಗೂ ಸ್ಥಳೀಯ ಗೋ ಪ್ರೇಮಿಗಳ ಸಹಕಾರದಿಂದ ಗೂಳಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.

ಇದರ ಮಾಲೀಕರು ಯಾರು ಎಂಬುದು ತಿಳಿದುಬಂದಿಲ್ಲ. ಹೀಗಾಗಿ ಗೋ ರಕ್ಷಣಾ ವೇದಿಕೆ ಹೊನ್ನಾವರ ಸದಸ್ಯರು ಗೇರುಸೊಪ್ಪ ಅಮೃತಧಾರಾ ಗೋ ಶಾಲೆಯವರೊಂದಿಗೆ ಮಾತನಾಡಿ, ಗೋ ಶಾಲೆಗೆ ತಲುಪಿಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version