ಸಂತೇಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತಗಲ್ ಭಾಗದ ಸುಮಾರು 25 ಯುವಕರು ಬಿ.ಜೆ.ಪಿ ಸೇರ್ಪಡೆ

ಕುಮಟಾ: ಕುಮಟಾ ತಾಲೂಕಿನ ಸಂತೇಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತಗಲ್ ಭಾಗದ ಸುಮಾರು 25 ಯುವಕರು ಬಿ.ಜೆ.ಪಿ ಸೇರ್ಪಡೆಗೊಂಡಿದ್ದು, ನೂತವಾಗಿ ಪಕ್ಷಕ್ಕೆ ಸೆರ್ಪಡೆಗೊಂಡ ಯುವಕರನ್ನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಇಂದು ತಮ್ಮ ನಿವಾಸದಲ್ಲಿ ಆತ್ಮಿಯವಾಗಿ ಸ್ವಾಗತಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾರ್ಯಕ್ರಮವೊಂದರ ಉದ್ಘಾಟನೆಗೆ ಕುಮಟಾ ತಾಲೂಕಿನ ಸಾಂತಗಲ್‌ಗೆ ತೆರಳಿದ ವೇಳೆ ಅಲ್ಲಿನ ಯುವಕರು ವೈಯಕ್ತಿಕವಾಗಿ ನನ್ನನ್ನು ಭೇಟಿ ಮಾಡಿ, ರಾತ್ರಿಯವೇಳೆಯಾದರೂ ಸಹ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡಿರುವ ಕುರಿತಾಗಿ ಸಂತಸ ವ್ಯಕ್ತಪಡಿಸಿದರು.

ಅಂತೇಯೇ ವಿಶೇಷವಾಗಿ ಪ್ರಧಾನ ಮಂತ್ರಿ ಮೋದಿ ನೇತೃತ್ವದ ಸರ್ಕಾರದಿಂದ ನಮ್ಮ ಸಮಾಜಕ್ಕೆ ಎರಡು ಪ್ರದ್ಮಶ್ರೀ ಪ್ರಶಸ್ತಿ ಬಂದಿದ್ದು, ಒಂದು ರೀತಿಯ ಇತಿಹಾಸ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಬಿ.ಜೆ.ಪಿ ಪಕ್ಷದ ಪರವಾಗಿ ನಿಲ್ಲುತ್ತೆವೆ ಎಂಬುದನ್ನು ತಿಳಿಸಿದ್ದರು. ನಿಜವಾಗಿಯೂ ನನಗೇ ಇಂತಹ ಯುವಕರ ಸಹಕಾರದ ಅವಶ್ಯವಿರುವಾಗ, ಸಾಂತಗಲ್ ಭಾಗದ ಯುವಕರು ನನ್ನ ಹಾಗು ನಮ್ಮ ಪಕ್ಷದ ಸಹಕಾರವನ್ನು ಕೇಳಿ ಬಂದಿರುವುದು ಬಹಳ ಸಂತೋಷದ ವಿಷಯ. ಈ ನಿಟ್ಟಿನಲ್ಲಿ ಸ್ವ ಇಚ್ಚೆಯಿಂದ ಪಕ್ಷದ ಹಾಗು ದೇಶದ ಸಲುವಾಗಿ ಕೆಲಸ ಮಾಡುತ್ತೆವೆ ಎಂದು ಬಂದಿರುವ ಸಾಂತಗಲ್ ಭಾಗದ ಸುಮಾರು 25 ಯುವಕರನ್ನು ಬಿ.ಜೆ.ಪಿ ಪಕ್ಷಕ್ಕೆ ಸೆರ್ಪಡೆ ಮಾಡಿಕೊಂಡಿದ್ದೆವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಕ್ಷಕ್ಕೆ ಸೆರ್ಪಡೆಗೊಂಡ ಯುವಕರಾದ ಗೋವಿಂದ ಗೌಡ, ಗಿರಿಯಾ ಗೌಡ, ಭರತ್ ಗೌಡ, ಸುನಿಲ್ ಗೌಡ, ಪಾಂಡುರAಗ ಗೌಡ, ತಿಮ್ಮು ಗೌಡ, ಶೇಕರ್ ಗೌಡ, ಕಮಲಾಕರ್ ಗೌಡ, ಮಂಜುನಾಥ ಗೌಡ, ಗಣಪತಿ ಗೌಡ ಮುಂತಾದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

Exit mobile version