![](http://i0.wp.com/vismaya24x7.com/wp-content/uploads/2021/11/Untitled-1-1.jpg?fit=1200%2C675&ssl=1)
ಶಿರಸಿ: ಚಿತ್ರನಟ ಹಾಗೂ ಸೊರಬ ಕ್ಷೇತ್ರದ ಶಾಸಕ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಕುಟುಂಬ ಸಮೇತರಾಗಿ ಶಕ್ತಿಪೀಠವಾದ ಮಾರಿಕಾಂಬೆ ದೇಗುಲಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇಗುಲದ ಆಡಳಿತ ಮಂಡಳಿ ಕುಮಾರ್ ಬಂಗಾರಪ್ಪ ಅವರನ್ನು ಸನ್ಮಾನಿಸಿದೆ. ನಂತರ ಬನವಾಸಿಯ ಮಧುಕೇಶ್ವರ ಹಾಗೂ ಗುಡ್ನಾಪುರದ ಬಂಗಾರೇಶ್ವರನ ದರ್ಶನವನ್ನೂ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೆ ಅವರ ಪುತ್ರಿ ವಿವಾಹವಾಗಿದ್ದು, ಪುತ್ರಿ ಹಾಗೂ ಅಳಿಯನೊಂದಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ