ಮಾಹಿತಿ
Trending

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಬಿ ಎನ್ ವಾಸರೆಗೆ ಸುಲಭ ಗೆಲುವು

ಕಾರವಾರ: ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಎನ್ ವಾಸರೆ ಅವರು ಸುಲಭ ಜಯಗಳಿಸಿದ್ದಾರೆ. ಒಟ್ಟು ಐದು ಅಭ್ಯರ್ಥಿಗಳು ಕಣದಲ್ಲಿದ್ದರು. ಜಿಲ್ಲೆಯಲ್ಲಿ ಒಟ್ಟು 4774 ಮತದಾರರಿದ್ದು, 2810 ಮತದಾರು ಮತಚಲಾಯಿಸಿದ್ದರು.

ಇದರಲ್ಲಿ ವಾಸರೆ ಅವರು 2168 ಮತಗಳನ್ನ ಪಡೆಯುವ ಮೂಲಕ ಅತೀ ಹೆಚ್ಚು1897 ಮತಗಳ ಅಂತರಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನೂ ಎದುರಾಳಿ ಅಭ್ಯರ್ಥಿ ವೇಣುಗೋಪಾಲ ಅವರು 324 ಮತ ಪಡೆದಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button