ಮಾಹಿತಿ
Trending

ಹಿರೇಗುತ್ತಿ ಹೈಸ್ಕೂಲ್‌ಗೆ ಪ್ರೊಜೆಕ್ಟರ್ ದೇಣಿಗೆ – ನಿತೀಶ ಜಯರಾಮ ನಾಯಕ

ಕುಮಟಾ: “ನಮ್ಮ ಸಂಸ್ಕೃತಿ ಆಚಾರ ವಿಚಾರ ಪರಂಪರೆ ಮೌಲ್ಯ ಉಳಿಸುವ ಗುರುತರ ಜವಬ್ದಾರಿ ದೇಶದ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳ ಮೇಲಿದೆ. ನಮ್ಮ ಹಿರೇಗುತ್ತಿ ಹೈಸ್ಕೂಲ್ ಮಕ್ಕಳ ಶಿಸ್ತು ಮತ್ತು ಅಕ್ಕರೆಯ ಪ್ರೀತಿಗೆ ಮನಸೋತಿದ್ದೇನೆ” ಎಂದು ಉಡುಪಿ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಸಂದೀಪ ಜಯರಾಮ ನಾಯಕ ನುಡಿದರು.

ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಸಹೋದರ ನಿತೀಶ ಜಯರಾಮ ನಾಯಕ ಕೊಡುಗೆ ಆಗಿ ನೀಡಿದ 40000/-ರೂಗಳ ಪ್ರೊಜೆಕ್ಟರ್ ಶಾಲೆಗೆ ನೀಡಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. “ನಿರಂತರ ಓದು ಮತ್ತು ಕ್ರೀಯಾಶೀಲತೆಯಿಂದ ಮಾತ್ರ ಸಾಧನೆ ಸಾಧ್ಯ ಹೈಸ್ಕೂಲ್ ವಿದ್ಯಾರ್ಥಿಗಳು ಹಿರೇಗುತ್ತಿಯ ಪ್ರತಿಭಾ ಸಂಪನ್ನ ಮಕ್ಕಳಾಗಿ ಶಾಲೆಗೆ ಪಾಲಕರಿಗೆ ಊರಿಗೆ ಸತ್ಕೀರ್ತಿ ತರಬೇಕು” ಎಂದರು.

ಪ್ರೊಜೆಕ್ಟರ್ ಕೊಡುಗೆ ಆಗಿ ನೀಡಿದ ನಿತೀಶ ಜಯರಾಮ ನಾಯಕ ಬೊಮ್ಮನ್ ಉದ್ದಿಮೆದಾರರು ಸಿಲ್ವಾಸ್ ಗುಜರಾತ್ ಮಾತನಾಡಿ “ ಜನನೀ ಜನ್ಮ ಭೂಮಿಶ್ಚö ಸ್ವರ್ಗಾದಪಿ ಗರಿಯಸೀ ಎಂಬoತೆ ನನ್ನೂರಿನ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಇಂದಿನ ಆಧುನಿಕ ಶಿಕ್ಷಣಕ್ಕೆ ತಕ್ಕಂತೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪ್ರೊಜೆಕ್ಟರ್ ನೀಡಿದ್ದೇನೆ ಸರಿಯಾಗಿ ಪ್ರಯೋಜನ ಪಡೆದುಕೊಳ್ಳಿ ಅಲ್ಲದೇ ಶಾಲೆಯ ಮಕ್ಕಳ ಹಾಗೂ ಆಡಳಿತ ಮಂಡಳಿ, ಶಿಕ್ಷಕರ ಪ್ರೀತಿಯ ಸನ್ಮಾನ ನನ್ನ ಜೀವನದ ಅವಿಸ್ಮರಣೀಯ ಸಂದರ್ಭ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಸೆಕ್ರೆಟರಿ ಮೋಹನ ಬಿ ಕರೆಮನೆ “ಸೇವೆಯ ಪ್ರತಿಫಲ ಸೇವೆ ಎಂಬoತೆ ಸಂದೀಪ ಹಾಗೂ ನಿತೀಶ ನಾಯಕ ಸಹೋದರರು ಶಾಲೆಗೆ ಪ್ರೊಜೆಕ್ಟರ್ ನೀಡಿದಕ್ಕೆ ತುಂಬಾ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಹೋದರರು ಇನ್ನೂ ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿ” ಎಂದರು.

ಹೈಸ್ಕೂಲ್ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ಮಾತನಾಡಿ “ಸಮುದಾಯ ಶೈಕ್ಷಣಿಕ ಅಗತ್ಯಗಳಿಗೆ ದಾನಿಗಳು ನೆರವಾಗಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ತಂತ್ರಜ್ಞಾನಾಧಾರಿತ ಶಿಕ್ಷಣ ನೀಡಲು ಸಹೋದರರ ಕೊಡುಗೆ ಸಹಕಾರಿಯಾಗಲಿದೆ” ಎಂದರು.
ಸಮಾರಂಭದ ವೇದಿಕೆಯಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೇಕರ, ನಾಗರಾಜ ಜಿ ನಾಯಕ, ವಿಶ್ವನಾಥ ಬೇವಿನಕಟ್ಟಿ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ಅಂಬಿಗ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು. ಶಿವಾನಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಎನ್ ರಾಮು ಹಿರೇಗುತ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಮಹಾದೇವ ಗೌಡ ವಂದಿಸಿದರು.

ವರದಿ:ಎನ್ ರಾಮು ಹಿರೇಗುತ್ತಿ

Back to top button