ಹಿರೇಗುತ್ತಿ ಹೈಸ್ಕೂಲಿನಲ್ಲಿ ಕನಕದಾಸ ಜಯಂತಿ ಆಚರಣೆ

ಕುಮಟಾ: ವ್ಯಕ್ತಿಗೆ ಕುಲ ಮುಖ್ಯವಲ್ಲ ಗುಣ ಮುಖ್ಯ ಉತ್ತಮ ಗುಣ ಉಳ್ಳವರನ್ನು ಭಗವಂತನು ಉದ್ಧಾರ ಮಾಡುತ್ತಾನೆ ಆದ್ದರಿಂದ ಉತ್ತಮ ಗುಣಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಳ್ಳುವಂತೆ ತಿಳಿ ಹೇಳಿದ್ದಾರೆ ಕನಕದಾಸರು” ಎಂದು ಸೆಕೆಂಡರಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಹೇಳಿದರು. ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಕನಕದಾಸರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ರಾಮು ಹಿರೇಗುತ್ತಿ ” ಕನಕದಾಸರು ಸಂತ ಕವಿ,ಹರಿದಾಸ ಪರಂಪರೆಯ ಮತ್ತು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರು.ಯುಗ ಪ್ರವರ್ತಕ. ಕ್ರಾಂತಿಕಾರಿ ಹಾಗೂ ದಾಸ ಶ್ರೇಷ್ಠ ರು ಇವರ ವಿಶಿಷ್ಟ ಗುಣ ಗಳಾದ ಭಕ್ತಿ, ವೈರಾಗ್ಯ, ಕಾವ್ಯ ರಚನಾ ಪ್ರತಿಭೆ ಅದ್ಭುತವಾದದು” ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ನಾಗರಾಜ ನಾಯಕ., ಮಹಾದೇವ ಗೌಡ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ, ಸುಮನ್ ಫರ್ನಾಂಡೀಸ್. ಬಿ.ಎಡ್ ಪ್ರಶಿಕ್ಷಣಾರ್ಥಿ ಸ್ವಾತಿ, ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು

ವಿಸ್ಮಯ ನ್ಯೂಸ್, ಕುಮಟಾ

Exit mobile version