Follow Us On

WhatsApp Group
Important
Trending

ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾದ ಪ್ರಥಮ ಪಿ.ಯು ಓದುತ್ತಿದ್ದ ವಿದ್ಯಾರ್ಥಿ: ಮುಗಿಲುಮುಟ್ಟಿದ ಆಕ್ರಂದನ

ಹೊನ್ನಾವರ: ಕಾಲೇಜಿನಲ್ಲಿ ಪ್ರಥಮ ಪಿ.ಯು ಓದುತ್ತಿದ್ದ ವಿದ್ಯಾರ್ಥಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಲ್ಲೂಕಿನ ಮುಗ್ವಾ ಹಳಗೇರಿ ಮೂಲದ ಅನಂತವಾಡಿ ಕೋಟಾದಲ್ಲಿ ವಾಸವಾಗಿದ್ದ , ವಿಶಾಲ ಮಂಜು ಗೌಡ ಸಾವಿಗೆ ಶರಣಾದ ವ್ಯಕ್ತಿ.

ರೈಲಿಗೆ ಸಿಕ್ಕು ದೇಹ ಛಿದ್ರವಾಗಿದ್ದು ರುಂಡ ಒಂದು ಕಡೆ ಮುಂಡ ಒಂದು ಕಡೆ ಬಿದ್ದಿದೆ. ಕೃಷಿಕರಾಗಿರುವ ತಂದೆ ತಾಯಿಯ ಕಿರಿಯ ಮಗನಾಗಿದ್ದ ಈತನನ್ನು ಚೆನ್ನಾಗಿ ಓದಿಸುವ ಹಂಬಲ ಇಟ್ಟುಕೊಂಡಿದ್ದರು. ಮಗ ಸಾವಿಗೆ ಶರಣಾಗಿರುವ ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದು ಹೆತ್ತವರನ್ನು ಆಘಾತಕ್ಕೀಡುಮಾಡಿದೆ.

ಒಂಬತ್ತನೇ ತರಗತಿ ವರೆಗೆ ಮುರ್ಡೇಶ್ವರದಲ್ಲಿನ ಬೀನಾ ಸ್ಕೂಲ್ ನಲ್ಲಿ ಓದಿದ್ದು, ಹತ್ತನೇ ತರಗತಿಯನ್ನು ಕವಲಕ್ಕಿಯ ಶ್ರೀಭಾರತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಶಾಲ್ ಓದಿದ್ದ. ಘಟನೆ ನಡೆದ ಸ್ಥಳಕ್ಕೆ ಮಂಕಿ ಪೋಲೀಸರು ಬಂದು, ಸಾರ್ವಜನಿಕರ ಸಹಕಾರದಿಂದ ಶವವನ್ನು ಸ್ಥಳಾಂತರಿಸಿದ್ದಾರೆ.

ವಿಸ್ಮಯ ನ್ಯೂಸ್ , ಹೊನ್ನಾವರ

Back to top button