ಜನ್ಮದಿನದಂದು ನೇತ್ರದಾನ ಶಪಥ: ಯೂತ್ ಫಾರ್ ಸೇವಾದ ಸ್ವಾತಿ ನಾಯ್ಕ

ಶಿರಸಿ: ನಗರದ ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂಸೇವಕಿ(ವಾಲಂಟಿಯರ್) ಗಾಂಧಿನಗರದ ಕುಮಾರಿ ಸ್ವಾತಿ ನಾಯ್ಕ ತನ್ನ ಜನ್ಮದಿನದಂದು ನೇತ್ರದಾನ ಮಾಡುವ ನಿರ್ಧಾರ ಮಾಡಿ ಗಣೇಶ ನೇತ್ರಾಲಯದ ಡಾ. ಕೆ.ವಿ ಶಿವರಾಮ ಮತ್ತು ಲಯನ್ಸ್ ನೇತ್ರ ಭಂಢಾರದ ಡಾ. ವಿಶ್ವನಾಥ ಅಂಕದ ಅವರ ಸಮ್ಮುಖದಲ್ಲಿ ನೇತ್ರದಾನದ ಶಪಥ ಫಾರಂ ಭರ್ತಿ ಮಾಡಿ ಡಾ.ಕೆವಿ ಶಿವರಾಮ ಅವರಿಗೆ ಹಸ್ತಾಂತರ ಮಾಡಿ ಮಾದರಿಯಾಗಿದ್ದಾರೆ.

ಯೂತ್ ಫಾರ್ ಸೇವಾದ ನೇತ್ರದಾನದ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಾಗ ತಾನು ಕೂಡಾ ನೇತ್ರದಾನ ಮಾಡಬೇಕೆಂಬ ಪ್ರೇರಣೆಯಾಯಿತೆಂದು ತಿಳಿಸುತ್ತಾರೆ. ಸಂಗೀತದಲ್ಲಿ ವಿದ್ವತ್ ಮಾಡುತ್ತಿರುವ ಮತ್ತು ಫ್ಯಾಷನ್ ಡಿಸೈನ್ ಹಾಗೂ ಬಿ.ಕಾಂ ಮಾಡಿರುವ ಕು.ಸ್ವಾತಿ ಕಳೆದ 5 ವರ್ಷದಿಂದ ಯೂತ್ ಫಾರ್ ಸೇವಾ ಸ್ವಯಂಸೇವಕಿಯಾಗಿ ಪರಿಸರ ಗೀತೆ ಅಭಿಯಾನ ಮತ್ತು ಹಸಿರು ಪಯಣ ಶಿಬಿರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕು.ಸ್ವಾತಿ ನಾಯ್ಕ ಮಾರಿಕಾಂಭಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಉಪನ್ಯಾಸಕ ನಾಗರಾಜ ನಾಯ್ಕ ಮತ್ತು ಭಾರತಿ ನಾಯ್ಕ ಅವರ ಪುತ್ರಿಯಾಗಿದ್ದಾಳೆ.

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 988044653

Exit mobile version