ಹಸು ಬಿಡಲು ಕಾಡಿಗೆ ಹೋಗಿದ್ದ ವ್ಯಕ್ತಿಗೆ ಪ್ರಾಣಿ ಎಂದು ತಿಳಿದು ಗುಂಡು ಹಾರಿಸಿದ ಭೇಟೆ ಆಡಲು ಬಂದಿದ್ದ ಅಪರಿಚಿತರು

ಸಿದ್ದಾಪುರ: ಬೇಟೆ ಆಡಲು ಬಂದಿದ್ದವರ ನಾಡ ಬಂದೂಕಿನಿAದ ಗುಂಡು ಹಾರಿ ವ್ಯಕ್ತಿಯೊಬ್ಬನಿಗೆ ಗಾಯವಾದ ಘಟನೆ ತಾಲೂಕಿನ ಗವಿನಸರದಲ್ಲಿ ನಡೆದಿದೆ. ಮಹೇಶ್ ಪೂಜಾರಿ ಗುಂಡು ತಗುಲಿದ ವ್ಯಕ್ತಿ. ಹಸು ಬಿಡಲು ಕಾಡಿಗೆ ಹೋಗಿದ್ದ ಈತನಿಗೆ ಕಾಡಿನಲ್ಲಿ ಭೇಟೆ ಆಡಲು ಬಂದಿದ್ದ ಅಪರಿಚಿತರು ಪ್ರಾಣಿ ಎಂದು ಗುಂಡು ಹಾರಿಸಿದ್ದು ಕಾಲಿಗೆ ಗಾಯವಾಗಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version